ADVERTISEMENT

ಮಧುಗಿರಿ: ಕಾರು ಡಿಕ್ಕಿ, ಗಂಡು ಕೃಷ್ಣ ಮೃಗ ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 7:27 IST
Last Updated 12 ಏಪ್ರಿಲ್ 2020, 7:27 IST
   

ಮಧುಗಿರಿ: ಓಮ್ನಿ ಕಾರು ವಾಹನ ಡಿಕ್ಕಿ ಹೊಡೆದು ಕೃಷ್ಣಮೃಗ ಸಾವನ್ನಪ್ಪರುವ ಘಟನೆ ತಾಲ್ಲೂಕಿನ ಗರಣಿ ಗ್ರಾಮದ ನಲ್ಲಹಳ್ಳಿ ಗೇಟ್ ಸಮೀಪ ಶನಿವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮದ ಕೃಷ್ಣಮೃಗಗಳು ಗುಂಪು ಗುಂಪಾಗಿ ಆಹಾರ ಮತ್ತು ಕುಡಿಯುವ ನೀರು ಹುಡುಕಿಕೊಂಡು ಬಂದಿದ್ದ ಸಂದರ್ಭದಲ್ಲಿ ರಸ್ತೆ ದಾಟುವಾಗ ಓಮ್ನಿ ಕಾರು ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ

ಗಂಡು ಕೃಷ್ಣಮೃಗದ ಕಾಲು ಮತ್ತು ಹೊಟ್ಟೆ ಭಾಗಕ್ಕೆ ಬಲವಾಗಿ ಹೊಡೆತ ಬಿದ್ದು ಮೃತಪಟ್ಟಿದೆ. ಭಾನುವಾರ ಬೆಳಿಗ್ಗೆರೈತರು ಕೃಷ್ಣಮೃಗ ಮೃತಪಟ್ಟಿರುವ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣಅಧಿಕಾರಿಗಳು ಭೇಟಿ ನೀಡಿ, ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ, ರಾಮದೇವರ ಬೆಟ್ಟದ ಅರಣ್ಯ ಪ್ರದೇಶದ ನರ್ಸರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಕೃಷ್ಣಮೃಗಕ್ಕೆ ಡಿಕ್ಕಿ ಹೊಡೆದ ಓಮ್ನಿ ಕಾರನ್ನು ಪತ್ತೆ ಹಚ್ಚಲು ಕ್ರಮ ವಹಿಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ವಾಸದೇವಮೂರ್ತಿ ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.