ADVERTISEMENT

ರಸಗೊಬ್ಬರ ಮಾರಾಟದಲ್ಲಿ ಲೋಪ: ತುಮಕೂರಿನಲ್ಲಿ ಅಧಿಕಾರಿಗಳಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2020, 8:31 IST
Last Updated 22 ಆಗಸ್ಟ್ 2020, 8:31 IST
   

ತುಮಕೂರು: ತುಮಕೂರು ಉಪವಿಭಾಗದ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿರುವ ರಸಗೊಬ್ಬರ ಅಂಗಡಿಗಳ ಮೇಲೆ ಕೃಷಿ ಆಧಿಕಾರಿಗಳು ಕ್ಷಿಪ್ರ ದಾಳಿ ನಡೆಸಿದ್ದಾರೆ.

ಈ ವೇಳೆ ರಸಗೊಬ್ಬರ ಮಾರಾಟದಲ್ಲಿ ಲೋಪ ಕಂಡು ಬಂದ 34 ಅಂಗಡಿ ಮಾಲೀಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಗಂಭೀರ ಲೋಪವೆಸಗಿದ 6 ಮಾರಾಟಗಾರರಿಗೆ ಸ್ಥಳದಳಲ್ಲಿಯೇ ಮಾರಾಟ ತಡೆ ಅದೇಶ ಜಾರಿ ಮಾಡಲಾಯಿತು.

ADVERTISEMENT

ಮುಂದಿನ ದಿನಗಳಲ್ಲಿ ಇದೇ ಲೋಪವೆಸಗಿದರೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.

ಇದೇ ರೀತಿ ಜಿಲ್ಲೆಯ‌‌ ವಿವಿಧೆಡೆ ಅನಿರೀಕ್ಷಿತ ದಾಳಿ ಮುಂದುವರೆಯಲಿದ್ದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಪಿ.ಓ.ಎಸ್ ಬಿಲ್‌ ನೀಡದೇ ಇರುವುದು ಹಾಗೂ ಅಕ್ರಮ ದಾಸ್ತಾನು ಮೂಲಕ ರೈತರಿಗೆ ತೊಂದರೆಯಾದರೆ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಸಿದರು.

ಈ ವಾರದಲ್ಲಿ ನಡೆದ ಸತತ 3ನೇ ದಾಳಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.