ADVERTISEMENT

ಕುಣಿಗಲ್: ನಾಲ್ವರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 4:37 IST
Last Updated 5 ಅಕ್ಟೋಬರ್ 2021, 4:37 IST
ಕುಣಿಗಲ್ ತಾಲ್ಲೂಕಿನ ಮೆಣಸಕೆರೆದೊಡ್ಡಿಯ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಎಂ.ಎಸ್. ವರ್ಷಿತಾ, ಎಚ್.ಎಲ್. ಪರಿಣಿತಾ, ಎಚ್‌.ಎಸ್. ಶಶಾಂಕ್ ಮತ್ತು ವಿದ್ಯಾ ಎಂ. ಅವರೊಂದಿಗೆ ಶಿಕ್ಷಕ ಸೀನಯ್ಯ ಇದ್ದಾರೆ.
ಕುಣಿಗಲ್ ತಾಲ್ಲೂಕಿನ ಮೆಣಸಕೆರೆದೊಡ್ಡಿಯ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಎಂ.ಎಸ್. ವರ್ಷಿತಾ, ಎಚ್.ಎಲ್. ಪರಿಣಿತಾ, ಎಚ್‌.ಎಸ್. ಶಶಾಂಕ್ ಮತ್ತು ವಿದ್ಯಾ ಎಂ. ಅವರೊಂದಿಗೆ ಶಿಕ್ಷಕ ಸೀನಯ್ಯ ಇದ್ದಾರೆ.   

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಕುಗ್ರಾಮ ಮೆಣಸಕೆರೆ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಮೆಣಸಕೆರೆದೊಡ್ಡಿ 50 ಕುಟುಂಬಗಳಿರುವ ಗುಡ್ಡಗಾಡು ಪ್ರದೇಶದ ಮಧ್ಯದಲ್ಲಿದೆ. ವಿದ್ಯಾರ್ಥಿಗಳಾದ ಎಂ.ಎಸ್. ವರ್ಷಿತಾ, ಎಚ್.ಎಲ್. ಪರಿಣಿತಾ, ಎಚ್.ಎಸ್. ಶಶಾಂಕ್ ಮತ್ತು ವಿದ್ಯಾ ಎಂ. ಆಗಸ್ಟ್‌ನಲ್ಲಿ ನಡೆದ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಆಯ್ಕೆಗೆ ಶ್ರಮಿಸಿದ ಶಿಕ್ಷಕರಾದ ಎಚ್.ಜಿ. ಸೀನಯ್ಯ ಮತ್ತು ಶಿವಲಿಂಗಯ್ಯ ಅವರಿಗೆ ಗ್ರಾಮಸ್ಥರು ಅಭಿನಂದನೆ
ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.