ADVERTISEMENT

ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಹೊರಟ ವರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:07 IST
Last Updated 2 ಡಿಸೆಂಬರ್ 2020, 2:07 IST

ತುಮಕೂರು: ನಗರದ ಬಲರಾಮ್ ಶೆಟ್ಟಿ ಮತ್ತು ರಮಾದೇವಿ ಅವರ ಪುತ್ರ ನಿರೂಪ್ ತಮ್ಮ ವಿವಾಹಕ್ಕೆ ಬೆಂಗಳೂರಿಗೆ ತೆರಳಲು ಮಂಗಳವಾರ ಹೆಲಿಕಾಪ್ಟರ್ ಬಳಸುವ ಮೂಲಕ ಭರ್ಜರಿ ಹವಾ ಸೃಷ್ಟಿಸಿದರು.

ನಿರೂಪ್ ಅವರ ವಿವಾಹ ಬೆಂಗಳೂರಿನ ತಲಘಟ್ಟಪುರದ ಕಲ್ಯಾಣ ಮಂಟಪವೊಂದರಲ್ಲಿ ಮಂಗಳವಾರ ಮತ್ತು ಬುಧವಾರ ನಡೆಯಲಿದೆ. ನಗರದ ಗುಬ್ಬಿ ಗೇಟ್‌ನ ಹೆಲಿಪ್ಯಾಡ್‌ನಿಂದ ಬೆಳಿಗ್ಗೆ ಹೆಲಿಕಾಪ್ಟರ್‌ ಹತ್ತಿದ ನಿರೂಪ್ ನೇರವಾಗಿ ತಲಘಟ್ಟ ಪುರದ ಹೆಲಿಪ್ಯಾಡ್‌ನಲ್ಲಿ ಇಳಿದಿದ್ದಾರೆ. ಈ ವೇಳೆ ವಧು ಐಶ್ವರ್ಯಾ ಅವರ ಸಂಬಂಧಿಕರು ಹರ್ದೋದ್ಗಾರದಿಂದ ವರನನ್ನು ಸ್ವಾಗತಿಸಿದರು.

ತುಮಕೂರು ಮತ್ತು ಬೆಂಗಳೂರಿನ ನಡುವೆ ಓಡಾಟದ ಅವಧಿ ಸರಾಸರಿ ಒಂದೂವರೆ ತಾಸು ಇದೆ. ಸಾಮಾನ್ಯವಾಗಿ ಶುಭ ಸಮಾರಂಭಗಳಿಗೆ ಬೆಂಗಳೂರಿಗೆ ತೆರಳಲು ಕಾರು ಬಳಸುವರು. ಆದರೆ ಬಲರಾಮ್ ಶೆಟ್ಟಿ ತಮ್ಮ ಪುತ್ರನ ವಿವಾಹಕ್ಕೆ ಹೆಲಿಪಾಪ್ಟರ್ ಬಳಸುವ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.