ADVERTISEMENT

ಹುಳಿಯಾರು: ತುಂಬಿ ಹರಿದ ಕೆರೆ, ಕಟ್ಟೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 3:09 IST
Last Updated 11 ಸೆಪ್ಟೆಂಬರ್ 2020, 3:09 IST
ಹುಳಿಯಾರು ಹೋಬಳಿ ದಸೂಡಿ- ರಂಗನಕೆರೆ ರಸ್ತೆ ನಡುವಿನ ಕಟ್ಟೆ ಕೋಡಿ ಹರಿಯಿತು
ಹುಳಿಯಾರು ಹೋಬಳಿ ದಸೂಡಿ- ರಂಗನಕೆರೆ ರಸ್ತೆ ನಡುವಿನ ಕಟ್ಟೆ ಕೋಡಿ ಹರಿಯಿತು   

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು ಅಲ್ಲಲ್ಲಿ ಕೆರೆ- ಕಟ್ಟೆಗಳಿಗೆ ನೀರು ಬಂದಿದೆ. ಕೆಲವೆಡೆ ಬೆಳೆ ನಷ್ಟವಾಗಿದೆ.

ಹುಳಿಯಾರು ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಮಳೆಯಾಗಿದೆ. ದಸೂಡಿ ಭಾಗದ ಸುತ್ತಮುತ್ತ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ದಸೂಡಿ- ರಂಗನಕೆರೆ ನಡುವಿನ ಕಟ್ಟೆ ಒಂದೇ ರಾತ್ರಿಗೆ ಕೋಡಿ ಹರಿದಿದೆ.

ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಸೇರಿದ ಸಂತೆಕಣಿವೆ ಕೆರೆ, ರಾಮಪ್ಪನ ಕೆರೆಗಳಿಗೆ ನೀರು ಬಂದಿದೆ. ನುಲೇನೂರು ಹಾಗೂ ರಂಗನಕೆರೆ ಭಾಗದಲ್ಲಿ ಉತ್ತಮ ಮಳೆಯಾಗಿ ರೈತರ ಹೊಲಗಳಲ್ಲಿ ನಿರ್ಮಿಸಿರುವ ಏರಿ- ಬದುಗಳು ಕೊಚ್ಚಿಹೋಗಿವೆ. ಸೋಮನಹಳ್ಳಿ ಗ್ರಾಮದಲ್ಲಿ ಜೋರು ಮಳೆಗೆ ಚರಂಡಿ ಕಟ್ಟಿ, ಹಲವು ಮನೆಗಳಿಗೆ ನೀರು ನುಗ್ಗಿದೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.