ADVERTISEMENT

ಗುಬ್ಬಿ: ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಚುಚ್ಚಿ ಕೊಲೆಗೈದ ಪತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 7:27 IST
Last Updated 3 ಜೂನ್ 2020, 7:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಬ್ಬಿ: ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಚಾಕುವಿನಿಂದ ಮನಬಂದಂತೆ ಚುಚ್ಚಿ ಸಾಯಿಸಿ, ಕೊನೆಗೆ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಇಂದು(ಬುಧವಾರ) ಮುಂಜಾನೆ ನಡೆದಿದೆ.

ಗುಬ್ಬಿ ಪಟ್ಟಣದ ಮಗ್ಗದವರ ಬೀದಿಯ ಶಾಂತಾನಂದಾಶ್ರಮ ರಸ್ತೆಯ ವಾಸಿ ನಾಗರಾಜು(26) ಕೊಲೆಗೈದ ವ್ಯಕ್ತಿ. ಈತನಿಗೆ ನಿಟ್ಟೂರು ಹೋಬಳಿ ತಳವಾರಹಳ್ಳಿಯ ದಿವ್ಯಾ(23) ಎಂಬುವವರೊಂದಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆ ಮಾಡಿಕೊಡಲಾಗಿತ್ತು.

ಬುಧವಾರ ಬೆಳಗಿನ ಜಾವ 5.30 ರ ಹೊತ್ತಿಗೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದ್ದು, 6.30 ರ ಹೊತ್ತಿಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ದೇಹಕ್ಕೆ ಮನಬಂದಂತೆ ಚುಚ್ಚಿ ಸಾಯಿಸಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾದ ಪತ್ನಿ ಮನೆಯಲ್ಲೇ ಸಾವನ್ನಪಿದ್ದಾರೆ.

ADVERTISEMENT

ಕೊಲೆಗೈದ ವ್ಯಕ್ತಿ ಠಾಣೆಯಲ್ಲಿ ಈ ಮೊದಲೇ ಹುಡುಗಿಗೆ ಮದುವೆಯಾಗಿತ್ತು ನನಗೆ ಮರೆಮಾಚಿ ಮದುವೆ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.