ADVERTISEMENT

ಜಯಚಂದ್ರ ಗೆಲುವು: ಬಲಗಡೆ ಹೂ ನೀಡಿದ ಹೊನ್ನಾದೇವಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 7:47 IST
Last Updated 9 ನವೆಂಬರ್ 2020, 7:47 IST
ಬಲಗಡೆ ಹೂ ನೀಡಿದ ಹೊನ್ನಾದೇವಿ
ಬಲಗಡೆ ಹೂ ನೀಡಿದ ಹೊನ್ನಾದೇವಿ   

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಗೆಲ್ಲುವುದಾದರೆ ಬಲಗಡೆ ಹೂ ಕೊಡು ತಾಯಿ-ಹೀಗೆ ಕೋರಿಕೆ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊನ್ನಾದೇವಿ ಬಲಗಡೆಯೇ ಹೊ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನಗರದ ಹೊನ್ನಾದೇವಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ಕೋರಿಕೆ ಸಲ್ಲಿಸಿದ್ದರು.

ಮಂಗಳವಾರ (ನ.10) ಮತ ಎಣಿಕೆ ನಡೆಯಲಿದೆ‌. ಈ ವಿಡಿಯೊವನ್ನು ಕಾಂಗ್ರೆಸ್ ಕಾರ್ಯಕರ್ತರು ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ.

ADVERTISEMENT

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರ ಗೆಲುವಿಗೂ ಸುಮಲತಾ ಅವರ ಬೆಂಬಲಿಗರು ಕೋರಿಕೆ ಸಲ್ಲಿಸಿದ್ದರು. ಆಗಲೂ ದೇವಿಯ ಮೂರ್ತಿಯ ಬಲಗಡೆಯಿಂದ ಹೂ ಕೆಳಕ್ಕೆ ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.