ADVERTISEMENT

ಎಲ್‌ಕೆಜಿ ಮಗುವಿಗೆ ಪಾಠ ಕಲಿಸಿಲ್ಲವೆಂದು ಶಿಕ್ಷಕಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:58 IST
Last Updated 7 ಜುಲೈ 2019, 19:58 IST
   

ಕುಣಿಗಲ್: ‘ಎಲ್‌ಕೆಜಿ ಮಗುವಿಗೆ ಏನೂ ಕಲಿಸಿಲ್ಲ’ ಎಂದು ಆರೋಪಿಸಿದ ಪೋಷಕರು ಅಂಕನಹಳ್ಳಿ ಮಠದ ಪಿರಂಗಿಸ್ವಾಮಿ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕಿ ನಾಗಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.

‘ನಾನು ಶಾಲೆಯ ಕಚೇರಿಯಲ್ಲಿ ಇದ್ದಾಗ ವಿದ್ಯಾರ್ಥಿ ನಿಶ್ಚಯ್ ಪೋಷಕರಾದ ಪ್ರವೀಣ್ ಮತ್ತು ಚೈತ್ರಾ ಬಂದು ನಮ್ಮ ಮಗನಿಗೆ ನೀವು ಏನನ್ನೂ ಕಲಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಾಗ್ವಾದ ನಡೆಸಿ ಹಲ್ಲೆಗೆ ಯತ್ನಿಸಿದರು.

‘ನಂತರ ಮತ್ತೆ ಈ ಇಬ್ಬರು ಮತ್ತು ಚೈತ್ರಾ ಅವರ ತಂದೆ ನಿತ್ಯಾನಂದಮೂರ್ತಿ ಬಂದು ರಕ್ತ ಬರುವಂತೆ ಹಲ್ಲೆ ನಡೆಸಿದರು. ಪ್ರಾಣ ಬೆದರಿಕೆ ಹಾಕಿದರು’ ಎಂದು ಹುಲಿಯೂರುದುರ್ಗ ಠಾಣೆಯಲ್ಲಿ ನಾಗಮ್ಮ ದೂರು ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.