ಕೊಡಿಗೇನಹಳ್ಳಿ: ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ ಮತ್ತು ಇತರೆ ಪ್ರದೇಶಗಳು ಭಾನುವಾರ ಜನತಾ ಕರ್ಪ್ಯೂನಿಂದ ಬಿಕೋ ಎನ್ನುತ್ತಿದ್ದವು.
ಅಂಗಡಿಗಳು, ಆಟೊ, ಬಸ್ ಸಂಚಾರ, ದೇವಸ್ಥಾನಗಳು, ಹೋಟೆಲ್, ಬಾರ್ಗಳು ಬಂದ್ ಆಗಿದ್ದವು. ಕೆಲ ದ್ವಿಚಕ್ರ ವಾಹನಗಳು ಓಡಾಡುವುದು ಹೊರತುಪಡಿಸಿ ಎಲ್ಲವೂ ಸ್ವಯಂಪ್ರೇರಿತ ಬಂದ್ ಆಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.