ADVERTISEMENT

ಕುಣಿಗಲ್: ಕುದುರೆ ಫಾರ್ಮ್‌ ಉಳಿವಿಗೆ ನಿರಂತರ ಹೋರಾಟ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 14:26 IST
Last Updated 31 ಜನವರಿ 2024, 14:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕುಣಿಗಲ್: ಸ್ಟಡ್ ಫಾರಂ ಉಳಿವಿಗೆ ಹೋರಾಟ ಮಾಡುತ್ತಿರುವವರನ್ನು ‘ನಿರುದ್ಯೋಗಿ ರಾಜಕಾರಣಿಗಳು’ ಎಂ‌ದಿರುವ ಶಾಸಕ ಡಾ.ರಂಗನಾಥ್ ಅವರ ಹೇಳಿಕೆ ಖಂಡಿಸಿ ಸ್ಟಡ್ ಫಾರ್ಮ್‌ ಉಳಿವಿಗಾಗಿ ಅಸ್ಥಿತ್ವಕ್ಕೆ ಬಂದಿರುವ ಸಮಿತಿಯ ಪದಾಧಿಕಾರಿಗಳು ಬುಧವಾರ ಸಭೆ ಸೇರಿ ಶಾಸಕರ ಕ್ಷಮೆಯಾಚಿಸಲು ಒತ್ತಾಯಿಸಿದರು.

ಕನ್ನಡ ಭನವದಲ್ಲಿ ನಡೆದ ಸಭೆಯಲ್ಲಿ ಹೋರಾಟ ತೀವ್ರಗೊಳಿಸುವ ನಿರ್ಧಾರ ಕೈಗೊಂಡರು.

ADVERTISEMENT

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿ, ‘ಅಧಿಕಾರದಲ್ಲಿದ್ದಾಗ ಮಾತ್ರ ಉದ್ಯೋಗಿ ರಾಜಕಾರಣಿ ಅಲ್ಲ. ಶಾಸಕ ಡಾ.ರಂಗನಾಥ್, ವೈದ್ಯರಾಗಿ ಉದ್ಯೋಗದಲ್ಲಿದ್ದರೂ, ತಾಲ್ಲೂಕಿಗೆ ರಾಜಕಾರಣಿಯಾಗಿ ಬಂದು ಜನಸೇವೆ ಮಾಡುವ ಬದಲು ವ್ಯವಹಾರ ಮಾಡುತ್ತಿದ್ದಾರೆ. ಆರು ವರ್ಷದ ಅಧಿಕಾರದಲ್ಲಿ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಕಳೆದ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳು ಸ್ಥಗಿತಗೊಂಡಿವೆ. ಕುದುರೆ ಫಾರ್ಮ್‌ ಉಳಿವಿಗಾಗಿ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ ಅವಕಾಶ ನೀಡುವುದಿಲ್ಲ. ಏಕಾಂಗಿಯಾದರೂ ಹೋರಾಟ ಮುಂದುವರೆಸುತ್ತೇನೆ’ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಮಾತನಾಡಿ, ತಾಲ್ಲೂಕಿನಲ್ಲಿ ಹೋರಾಟ ತೀವ್ರವಾಗುತ್ತಿದ್ದಂತೆ ಶಾಸಕ ಡಾ.ರಂಗನಾಥ್ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ನಿಲವು ಸ್ಪಷ್ಟಪಡಿಸಲು ಶಾಸಕರು ವಿಫಲರಾಗುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಕಡತ, ದಾಖಲೆಗಳು ಶಾಸಕ, ಸಂಸದರ ಸೂಚನೆ ಮೇರೆಗೆ ಸಿದ್ಧವಾಗುತ್ತಿವೆ ಎಂದು ಟೀಕಿಸಿದರು.

ತಾಲ್ಲೂಕಿಗೆ 2018ರಲ್ಲಿ ರಾಜಕಾರಣಿಯಾಗಿ ಉದ್ಯೊಗ ಮಾಡಲು ಬಂದ ಶಾಸಕರು, ಬಂಡವಾಳ ಹೂಡಿ ವ್ಯವಹಾರ ಮಾಡುತ್ತಾ ವ್ಯವಹಾರಸ್ಥ, ರಾಜಕಾರಣಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಮುಖಂಡ ರಾಜೇಶ್ ಗೌಡ, ‘ಶಾಸಕರು ವೈದ್ಯಕೀಯ ವೃತ್ತಿಯಲ್ಲಿದ್ದು, ಸೇವೆಯ ನೆಪದಲ್ಲಿ ರಾಜಕಾರಣಕ್ಕೆ ಬಂದು ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ. ಈಗ ಸರ್ಕಾರಿ ಭೂಮಿಗೂ ಕಣ್ಣು ಹಾಕಿದ್ದಾರೆ. ಕುದುರೆ ಫಾರಂ ಬಗ್ಗೆ ಅವರು ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಪದಾಧಿಕಾರಿಗಳಾದ ಜಿ.ಕೆ.ನಾಗಣ್ಣ, ಶಿವಶಂಕರ್, ವರದರಾಜು ಅಬ್ದುಲ್ ಮುನಾಫ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮ, ಅಮ್ ಆದ್ಮಿಯ ಜಯರಾಮಯ್ಯ, ರೈತ ಸಂಘದ ಕರಿಗೌಡ, ವೆಂಕಟೇಶ್‌, ಕರವೇ ಅಧ್ಯಕ್ಷ ಮಂಜುನಾಥ್, ಬಜರಂಗದಳದ ಗಿರೀಶ್ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.