ADVERTISEMENT

ಮಲ್ಲಸಂದ್ರ ಪಾಳ್ಯ: ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 16:13 IST
Last Updated 15 ಜೂನ್ 2019, 16:13 IST

ತುಮಕೂರು: ತಾಲ್ಲೂಕಿನ ಮಲ್ಲಸಂದ್ರ ಪಾಳ್ಯದ ರೈತ ಕೃಷ್ಣಯ್ಯ ಅವರ ಮನೆಯಲ್ಲಿ ಈಚೆಗೆ ಹಾಡ ಹಗಲೇ ಕಳ್ಳತನವಾಗಿದ್ದು, ₹ 48,500 ಮೊತ್ತದ ಆಭರಣ ಕಳವು ಮಾಡಲಾಗಿದೆ.

ಬುಧವಾರ ಕಳ್ಳತನ ನಡೆದಿದ್ದು, ಕಳ್ಳತನವಾದ ಆಭರಣದ ಬಿಲ್‌ಗಳನ್ನು ಹುಡುಕಿಕೊಂಡು ಕೃಷ್ಣಯ್ಯ ಅವರು ಶುಕ್ರವಾರ ತುಮಕೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಕೃಷ್ಣಯ್ಯ, ಅವರ ಪತ್ನಿ ದಯಲಕ್ಷ್ಮಮ್ಮ ಮತ್ತು ಕೃಷ್ಣಯ್ಯ ಅವರ ತಾಯಿ ಕೆಂಪಮ್ಮ ಅವರು ತೋಟಕ್ಕೆ ತೆರಳಿದ್ದರು. ಆ ದಿನ ಮಧ್ಯಾಹ್ನ 12 ಗಂಟೆಗೆ ಕೃಷ್ಣಯ್ಯ ಅವರ ತಾಯಿ ಮನೆಗೆ ಊಟಕ್ಕೆ ಬಂದು ಮತ್ತೆ ತೋಟಕ್ಕೆ ಹೋಗಿದ್ದರು. ಮನೆಯ ಬೀಗ ಕೀಯನ್ನು ಮನೆಯ ಮುಂಭಾಗದ ವಿದ್ಯುತ್ ಮೀಟರ್ ಬೋರ್ಡ್ ಬಳಿ ಇಟ್ಟು ಹೋಗಿದ್ದರು. ಮಧ್ಯಾಹ್ನ 1.15ಕ್ಕೆ ಕೃಷ್ಣಯ್ಯ ಮತ್ತು ಅವರ ಪತ್ನಿ ಮನೆಗೆ ಬಂದಾಗ ಮನೆ ಬೀಗ ತೆರೆದಿದ್ದು, ಒಳ ಹೋಗಿ ನೋಡಿದಾಗಿ ಚಿನ್ನಾಭರಣ ಕಳ್ಳತನವಾಗಿದ್ದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.