ADVERTISEMENT

ತುಮಕೂರು | ಕರಿಯಮ್ಮದೇವಿ ವಿಮಾನ ಗೋಪುರ ಕಳಶ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 4:55 IST
Last Updated 10 ಮೇ 2022, 4:55 IST
ತ್ಯಾಗಟೂರು ಗ್ರಾಮದೇವತೆ ಕರಿಯಮ್ಮ ದೇವಿ 
ತ್ಯಾಗಟೂರು ಗ್ರಾಮದೇವತೆ ಕರಿಯಮ್ಮ ದೇವಿ    

ಹಾಗಲವಾಡಿ: ನಿಟ್ಟೂರು ಹೋಬಳಿಯ ತ್ಯಾಗಟೂರು ಗ್ರಾಮದೇವತೆ ಕರಿಯಮ್ಮ ದೇವಿಯ ವಿಮಾನ ಗೋಪುರ ಬ್ರಹ್ಮಕಲಶ, ಕುಂಭಾಭಿಷೇಕ ಮಹೋತ್ಸವವು ಮೇ 12 ಮತ್ತು 13ರ ವರೆಗೆ ನಡೆಯಲಿದೆ.

ಮೇ 12ರಂದು ಸಂಜೆ ತ್ಯಾಗಟೂರು ಅರ್ಕೇಶ್ವರ ಸ್ವಾಮಿ, ಮೂಗನಾಯಕನ ಕೋಟೆ ಕೊಲ್ಲಾಪುರದಮ್ಮ ದೇವಿ, ಸಾಗಸಂದ್ರ ಕೆಂಪಮ್ಮ ದೇವಿ, ಕೆಸ್ತೂರಿನ ಅಹೋಬಲ ಲಕ್ಷ್ಮಿನರಸಿಂಹಸ್ವಾಮಿ, ಕೋಡಿನಾಗೇನಹಳ್ಳಿ ರಂಗನಾಥಸ್ವಾಮಿ, ನಿಟ್ಟೂರಿನ ಶಿವಭಕ್ತ ಬೇಡರ ಕಣ್ಣಪ್ಪಸ್ವಾಮಿ ದೇವರ ಆಗಮನವಿದೆ. ಕುಂಭಗಳ ಮೆರವಣಿಗೆ, ಗಣಪತಿ ಪೂಜೆ, ಗಂಗಾಪೂಜೆಯೊಂದಿಗೆ ಕರಿಯಮ್ಮ ದೇವಿಯ ಕಳಸ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ರಾತ್ರಿ ದೇವರಉತ್ಸವ ನಡೆಯಲಿದೆ. ಭಕ್ತಾದಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿದೆ.

ಮೇ 13ರಂದು ಶುಕ್ರವಾರ ಬೆಳಿಗ್ಗೆ ಗೋಪೂಜೆ ಮಹಾಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ, ಬೆಳಿಗ್ಗೆ 10ಗಂಟೆಗೆ ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಬ್ರಹ್ಮ ಕಲಶ, ಕುಂಭಾಭಿಷೇಕ ಮಹೋತ್ಸವವಿದೆ.

ADVERTISEMENT

ಮಧ್ಯಾಹ್ನ ಧಾರ್ಮಿಕ ಸಮಾರಂಭ ನಡೆಯಲಿದೆ. ರಾಜನಹಳ್ಳಿ ಮಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಶಿಡ್ಲೆಕೋಣ ಮಠದ ಸಂಜಯಕುಮಾರ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಅಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ನೇತೃತ್ವವಹಿಸಲಿದ್ದಾರೆ. ಮಾಜಿ ಶಾಸಕ ಕೆ.ಎನ್. ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಂಸದ ಜಿ.ಎಸ್. ಬಸವರಾಜು ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಭಾಗವಹಿಸಲಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಎನ್. ನರಸಿಂಹಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.