ADVERTISEMENT

ಉಪ್ಪಾರಹಳ್ಳಿ ತಾಂಡ: ಕುರಿ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 12:20 IST
Last Updated 20 ಡಿಸೆಂಬರ್ 2018, 12:20 IST
ಪಾವಗಡ ತಾಲ್ಲೂಕು ತಿರುಮಣಿ ಠಾಣೆ ಪೊಲೀಸರು ಆರೋಪಿಯಿಂದ ವಶಪಡಿಸಿಕೊಳ್ಳಲಾದ ಕುರಿಗಳನ್ನು ಮಾಲೀಕರ ವಶಕ್ಕೆ ಕೊಟ್ಟರು
ಪಾವಗಡ ತಾಲ್ಲೂಕು ತಿರುಮಣಿ ಠಾಣೆ ಪೊಲೀಸರು ಆರೋಪಿಯಿಂದ ವಶಪಡಿಸಿಕೊಳ್ಳಲಾದ ಕುರಿಗಳನ್ನು ಮಾಲೀಕರ ವಶಕ್ಕೆ ಕೊಟ್ಟರು   

ಪಾವಗಡ: ತಾಲ್ಲೂಕಿನ ಉಪ್ಪಾರಹಳ್ಳಿ ತಾಂಡದಲ್ಲಿ ಕುರಿ, ಮೇಕೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ತಿರುಮಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ಅನಂತಪುರ ಜಿಲ್ಲೆ ಸನಪ ಗ್ರಾಮದ ಅಂಜಿ ಬಂಧಿತ ಆರೋಪಿ. ಸೋಮವಾರ ರಾತ್ರಿ ರಾಮಾನಾಯ್ಕ, ಡಾಕಾನಾಯ್ಕ ಎಂಬುವವರ ಕುರಿಗಳನ್ನು ಕಳವು ಮಾಡಲಾಗಿತ್ತು. ತಿರುಮಣಿ ಪೊಲೀಸರು ಆರೋಪಿಯ ಜಾಡು ಹಿಡಿದು ಬಂಧಿಸಿದ್ದಾರೆ. ಆರೋಪಿಯಿಂದ 75 ಕುರಿ, ಮೇಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಶೈಲಮೂರ್ತಿ, ಸಬ್ ಇನ್‌ಸ್ಪೆಕ್ಟರ್ ರಾಮಕೃಷ್ಣಪ್ಪ, ಕೇಶವರಾಜು, ಗೋಕರ್ಣ, ಸೋಮು, ನಾಗೇಂದ್ರಪ್ರಸಾದ್, ಪುಂಡಲೀಕ್ ಲಮಾಣಿ, ಪ್ರವೀಣ್ ಭಜಂತ್ರಿ ತನಿಖಾ ತಂಡದಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.