ತುಮಕೂರು: ಮೂರು ದಿನಗಳಿಂದ ನಗರದಲ್ಲಿ ನಿತ್ಯ ಸಂಜೆ ಮಳೆ ಸುರಿದು ಗಿಡ, ಮರಗಳು ಬೀಳುತ್ತಿದ್ದು, ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ.
ಭಾನುವಾರ ಸಂಜೆಯೂ ಮಳೆ ಸುರಿಯಿತು. ಮಳೆಗಿಂತ ಗುಡು, ಮಿಂಚಿನ ಆರ್ಭಟವೇ ಜೋರಾಗಿತ್ತು. ಗಾಳಿಗೆ ತುಮಕೂರು ವಿಶ್ವವಿದ್ಯಾಲಯದ ಬಳಿ ಗಿಡಗಳು ವಿದ್ಯುತ್ ಮಾರ್ಗಗಳ ಮೇಲೆ ಬಿದ್ದಿದ್ದವು. ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿ ದುರಸ್ತಿ ಕಾರ್ಯ ಕೈಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.