ADVERTISEMENT

ರಾಜಶೇಖರ ಸ್ವಾಮೀಜಿ ನಿಧನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:01 IST
Last Updated 11 ಡಿಸೆಂಬರ್ 2023, 16:01 IST
ತೊರೆಮಠದ ರಾಜಶೇಖರ ಸ್ವಾಮೀಜಿ 
ತೊರೆಮಠದ ರಾಜಶೇಖರ ಸ್ವಾಮೀಜಿ    

ಗುಬ್ಬಿ (ತುಮಕೂರು): ಪಟ್ಟಣದ ತೊರೆಮಠದ ರಾಜಶೇಖರ ಸ್ವಾಮೀಜಿ (75) ಅನಾರೋಗ್ಯದಿಂದ ಸೋಮವಾರ ನಿಧನರಾದರು.

ಧಾರವಾಡ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಲ್ಲಿ ಸಹಾಯಕರಾಗಿದ್ದ ಅವರು ಹಿಂದಿನ ಪೀಠಾಧಿಕಾರಿಗಳಾಗಿದ್ದ ನೀಲಕಂಠ ಸ್ವಾಮೀಜಿ ಉತ್ತರಾಧಿಕಾರಿಯಾಗಿ 1986ರಲ್ಲಿ ಮಠದ ಜವಾಬ್ದಾರಿ ವಹಿಸಿಕೊಂಡಿದ್ದರು. ಸುಮಾರು 400 ವರ್ಷಗಳ ಹಿಂದೆ ಆಟವಿಸ್ವಾಮಿಗಳಿಂದ ಸ್ಥಾಪನೆಗೊಂಡಿದ್ದ ಮಠವು ಐತಿಹಾಸಿಕ ಪರಂಪರೆ ಹೊಂದಿದೆ.

ಮಂಗಳವಾರ ಸಾರ್ವಜನಿಕರ ದರ್ಶನದ ನಂತರ ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ಕ್ರಿಯಾಸಮಾಧಿ ಮಾಡಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.