ADVERTISEMENT

ಚಿಕ್ಕನಾಯಕನಹಳ್ಳಿ | ಹಿರಿಯ ನಾಗರಿಕರಿಗೆ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 4:02 IST
Last Updated 14 ಆಗಸ್ಟ್ 2023, 4:02 IST
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಚಿಕ್ಕನಾಯಕನಹಳ್ಳಿ: 76ನೇ ವರ್ಷದ ಸ್ವಾತಂತ್ರ್ಯೋತ್ಸವ ಅಂಗವಾಗಿ ಪಟ್ಟಣದ ರೋಟರಿ, ಇನ್ನರ್‌ವ್ಹೀಲ್‌ ಕ್ಲಬ್‌ನಿಂದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

50 ಮೀಟರ್ ನಡಿಗೆ, ನಾಣ್ಯ ಚಿಮ್ಮುವುದು, ನೋಟುಗಳ ಕಟ್ಟಿನ ಮೌಲ್ಯ ಅಂದಾಜು ಮಾಡುವುದು, ಪುರುಷರಿಗೆ ಗುಂಡು ಎಸೆತ, ಮಹಿಳೆಯರಿಗೆ ಬಕೆಟ್‍ಗೆ ರಿಂಗ್ ಹಾಕುವುದು ಹಾಗೂ ಮಡಿಕೆ ಒಡೆಯುವ ಸ್ಪರ್ಧೆ ನಡೆಸಲಾಯಿತು.

ಹಿರಿಯ ವಕೀಲ ದಿ. ಸೀತಾರಾಮಯ್ಯ ಜ್ಞಾಪಕಾರ್ಥ ಹಿರಿಯ ಆದರ್ಶ ದಂಪತಿ ಸ್ಪರ್ಧೆ ನಡೆದು ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.

ADVERTISEMENT

ರೋಟರಿಕ್ಲಬ್ ಹಾಗೂ ಪೊಲೀಸ್‌ ಠಾಣೆ ಸಹಯೋಗದಲ್ಲಿ ನಿಧಾನಗತಿ ಸೈಕಲ್ ಮತ್ತು ಮೋಟಾರ್ ಬೈಕ್ ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ನಡೆಸಲಾಯಿತು.

ರೋಟರಿ ಕ್ಲಬ್‌ ಅಧ್ಯಕ್ಷ ಎಂ.ದೇವರಾಜ್, ಕಾರ್ಯದರ್ಶಿ ಸಿ.ಡಿ.ಸುರೇಶ್, ಇನ್ನರ್‌ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಭವಾನಿ ಜಯರಾಂ, ಹಿರಿಯ ಸಾಹಿತಿ ಡಾ.ಎಂ.ವಿ. ನಾಗರಾಜರಾವ್, ಇಸ್ರೊ ಅಧಿಕಾರಿ ಸಿ.ಎಸ್. ಮಧುಸೂಧನ್ ವಿಜೇತರಿಗೆ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.