ತುಮಕೂರು: ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ
ಆರಂಭವಾಗಿದೆ. ಶಿಕ್ಷಕರು ನ.30ರವರೆಗೆ ಮೊಬೈಲ್ ಮೂಲಕ ಆನ್ಲೈನ್ ತಂತ್ರಾಂಶದಲ್ಲಿ ಶಿಕ್ಷಕ ಮಿತ್ರ/ಇಇಡಿಎಸ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.
ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಯಾವುದೇ ಸಮಸ್ಯೆಗಳು ಇದ್ದಲ್ಲಿ ಕಚೇರಿಗೆ ವೇಳೆ ಮಾಹಿತಿ ಪಡೆಯಬಹುದು. ಸಹಾಯವಾಣಿ 0816–2278444, ಶಿಕ್ಷಣಾಧಿಕಾರಿಗಳಾದ ರಂಗಧಾಮಪ್ಪ–9480886950, ಎ.ಟಿ.ರಂಗದಾಸಪ್ಪ–9449126869 ಸಂಪರ್ಕಿಸಬಹುದು.
ಪತಿ ಪತ್ನಿ ಪ್ರಕರಣದಡಿ ಆದ್ಯತೆ ಬಯಸುವವರು ನ.1ರ ನಂತರ ಪಡೆದ, ವೈದ್ಯಕೀಯ ಮತ್ತು ಅಂಗವಿಕಲ ಆದ್ಯತೆಯವರು ಆ.1ರ ನಂತರ ಪಡೆದ ದೃಢೀಕರಣ ಪತ್ರ
ಸಲ್ಲಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.