ಕುಣಿಗಲ್: ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಅರ್ಚಕ ದೇವರ ಚಿನ್ನದ ಪದಕ ಕದ್ದಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ.
ಅರ್ಚಕ ಯಶೋವರ್ಧನ ಅವರ ಮನೆಯಲ್ಲಿ ದೇವಾಲಯದ ಒಡವೆಗಳನ್ನು ಲಾಕರ್ನಲ್ಲಿಟ್ಟು, ವಿಶೇಷ ಪೂಜಾ ಸಮಯದಲ್ಲಿ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಲಾಕರ್ ತೆಗೆದು ಬಳಕೆ ಮಾಡಲಾಗುತ್ತಿತ್ತು. ನಂತರ ಅದೇ ಲಾಕರ್ನಲ್ಲಿಡುವ ವ್ಯವಸ್ಥೆ ಮೊದಲಿಂದಲೂ ನಡೆದು ಬಂದಿತ್ತು.
ಇತ್ತೀಚೆಗೆ 50 ಗ್ರಾಂ ಚಿನ್ನದ ಪದಕವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗಿದ್ದು, ವಿಷಯ ಬಹಿರಂಗಗೊಂಡು ವಿಚಾರಿಸಿದಾಗ ಅರ್ಚಕರೇ ಮಾರಾಟ ಮಾಡಿರುವ ಬಗ್ಗೆ ತಿಳಿದಿದೆ. ಗ್ರಾಮಸ್ಥರು ಅರ್ಚಕರ ಮನೆಗೆ ಬಂದಾಗ ಅರ್ಚಕ ಪರಾರಿಯಾಗಿದ್ದಾರೆ. ಇನ್ನಷ್ಟು ಒಡವೆಗಳು ಕಾಣೆಯಾಗಿರುವ ಶಂಕೆ ಇದೆ ಎಂದು ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.