ಕುಣಿಗಲ್: ಬೆಂಗಳೂರಿನಿಂದ ಹಾಸನಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವನನ್ನೇ ಕಟ್ಟಿ ಹಾಕಿ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.
ಹರೀಶ್ ಎಂಬುವವರು ಬೆಂಗಳೂರಿನಿಂದ ಸ್ವಗ್ರಾಮ ರಂಗನತಿಟ್ಟಿಗೆ ಬರಲು ಗೊರಗುಂಟೆಪಾಳ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದರು. ಆಗ ಬಂದ ಇಂಡಿಕಾ ಕಾರಿನವರು ಹಾಸನಕ್ಕೆ ಹೋಗುವುದಾಗಿ ತಿಳಿಸಿದರು. ಈ ಮೊದಲೇ ಕಾರಿನಲ್ಲಿ ಪ್ರಯಾಣಿಕರಿದ್ದ ಕಾರಣ ಹರೀಶ್ ಹತ್ತಿದರು.
ಸೋಲೂರಿನ ಬಳಿ ಬಂದಾಗ ಉಳಿದ ಪ್ರಯಾಣಿಕರು ಇಳಿದಿದ್ದು, ಹರೀಶ್ ಒಬ್ಬರೇ ಇದ್ದರು. ಕಾರಿನಲ್ಲಿದ್ದವರು ಹರೀಶ್ ಅವರನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಚಿನ್ನದ ಸರ, ಬ್ರಾಸ್ಲೈಟ್, ಉಂಗುರ ಮತ್ತು ₹ 20 ಸಾವಿರ, ಮೊಬೈಲ್ ದೋಚಿ, ಹರೀಶ್ ಅವರನ್ನು ತಾಲ್ಲೂಕಿನ ಕಣಿವೆಪಾಳ್ಯ ಬಳಿ ಎಸೆದು ಹೋಗಿದ್ದಾರೆ. ನಂತರ ಕಟ್ಟುಗಳನ್ನು ಬಿಚ್ಚಿಕೊಂಡು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.