ADVERTISEMENT

ರೈತ ಹೋರಾಟಗಾರರ ವಿಚಾರಗಳು ಶಾಶ್ವತವಾಗಿ ಉಳಿಯಲಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:05 IST
Last Updated 15 ಜುಲೈ 2020, 17:05 IST
ತಿಪಟೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಭಾವಚಿತ್ರ ವಿತರಣೆ ಮಾಡಲಾಯಿತು
ತಿಪಟೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಭಾವಚಿತ್ರ ವಿತರಣೆ ಮಾಡಲಾಯಿತು   

ತಿಪಟೂರು: ರೈತ ಹೋರಾಟಗಾರ ಬೆನ್ನಾಯಕನಹಳ್ಳಿ ದೇವರಾಜು ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುವ ಕೆಲಸವಾಗಬೇಕಿದೆ ಎಂದು ಪರಿಸರವಾದಿ ಸಿ.ಯತಿರಾಜು ಅಭಿಪ್ರಾಯಪಟ್ಟರು.

ನಗರದಲ್ಲಿ ರೈತಪರ ಹೋರಾಟಗಾರ ಬೆನ್ನಾಯಕನಹಳ್ಳಿ ದೇವರಾಜ್‍ ಅವರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರ ಕಷ್ಟಗಳ ನಿವಾರಣೆಗಾಗಿ ಹುಟ್ಟಿಕೊಂಡ ರೈತ ಸಂಘ ಅನೇಕ ಮುಂಚೂಣಿ ಹೋರಾಟಗಾರರು, ನಾಯಕರನ್ನು ಕೊಟ್ಟಿದ್ದು, ಅವರ ವಿಚಾರಧಾರೆಗಳು ಒಂದು ತಲೆಮಾರಿಗೆ ಸೀಮಿತವಾಗದೆ ಎಲ್ಲರಿಗೂ ತಲುಪುವ ಕಾರ್ಯವಾಗಬೇಕಿದೆ ಎಂದರು.

ADVERTISEMENT

ರೈತ ಹೋರಾಟಗಾರನ ಸಾವು ಕೇವಲ ದೈಹಿಕವಾಗಿಯೇ ಹೊರತು ಆತನ ವಿಚಾರಗಳಿಗೆ ಎಂದೂ ಸಾವಿರು ವುದಿಲ್ಲ. ಈ ನಿಟ್ಟಿನಲ್ಲಿ ಬೆನ್ನಾಯಕನಹಳ್ಳಿ ದೇವರಾಜು ಹೆಸರು ಶಾಶ್ವತವಾಗಿ ಉಳಿಯುವಂತ ಕಾರ್ಯವನ್ನು ಮಾಡುವ ಅಗತ್ಯವಿದೆ ಎಂದರು.

ಪರಿಸರ ಹೋರಾಟಗಾರ ಬಿ.ಎಲ್.ಜನಾರ್ದನ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಬಿ.ಯೋಗೀಶ್ವರಸ್ವಾಮಿ, ಬಿ.ಉಮೇಶ್, ಸಿ.ಬಿ.ಶಶಿಧರ್, ದೇವರಾಜು, ಸಿದ್ಧಲಿಂಗಮೂರ್ತಿ, ಮನೋಹರ್ ಪಟೇಲ್, ಶ್ರೀಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.