ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಶುಕ್ರವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆಗೆ ಕೋರಂ ಕೊರತೆ ಎದುರಾಗಿದೆ. ಸಭೆ ನಡೆಯುವ ಸಾಧ್ಯತೆ ಇಲ್ಲ. ಅಧ್ಯಕ್ಷರ ವಿರುದ್ಧ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ 49 ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೇರೆಗೆ ಅ.7ರಂದು ಪ್ರಾದೇಶಿಕ ಆಯುಕ್ತರು ಸಭೆ ನಿಗದಿಗೊಳಿಸಿದ್ದಾರೆ. ಈ ನಡುವೆ ಅಧ್ಯಕ್ಷೆ ಲತಾ ಅವರು ವಿಶೇಷ ಸಾಮಾನ್ಯ ಸಭೆ ಕರೆದಿದ್ದರು.
ಅನುದಾನ ಹಂಚಿಕೆ ಮತ್ತು ಕಾಮಗಾರಿ ವಿಚಾರದಲ್ಲಿ ಚರ್ಚಿಸಲು ಸಭೆ ಕರೆದಿರುವುದಾಗಿ ತಿಳಿಸಿದ್ದರು.
ಸಭೆ ಆರಂಭವಾಗಿ ಒಂದು ತಾಸು ಕಳೆದರೂ ನಾಲ್ಕು ಮಂದಿ ಸದಸ್ಯರು ಮಾತ್ರ ಭಾಗಿಯಾಗಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ಜಿ.ಪಂ ನಲ್ಲಿ ಅಧಿಕಾರ ಹಂಚಿಕೊಂಡಿವೆ. ಜೆಡಿಎಸ್ ನ ಲತಾ ಅಧ್ಯಕ್ಷರಾಗಿ ಮತ್ತು ಬಿಜೆಪಿಯ ಶಾರದಾ ಉಪಾಧ್ಯಕ್ಷರಾಗಿದ್ದಾರೆ.
ಜಿ.ಪಂನಲ್ಲಿ ಬಲಾಬಲ
ಒಟ್ಟು:57
ಬಿಜೆಪಿ: 19
ಕಾಂಗ್ರೆಸ್: 23
ಜೆಡಿಎಸ್;24
ಪಕ್ಷೇತರ; 1
ಸದಸ್ಯರು ಇದ್ದಾರೆ. ಇವರಲ್ಲಿ ಜೆಡಿಎಸ್ ನ 13 ಮಂದಿ ಅವಿಶ್ವಾಸಕ್ಕೆ ಸಹಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.