ADVERTISEMENT

ಚಿ.ನಾ.ಹಳ್ಳಿ: ಉರುಳಿದ 70 ವಿದ್ಯುತ್ ಕಂಬ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:06 IST
Last Updated 18 ಆಗಸ್ಟ್ 2024, 14:06 IST
ಮೇಲನಹಳ್ಳಿ ಬಳಿ ಮುರಿದು ಬಿದ್ದಿರುವ ವಿದ್ಯುತ್ ಪರಿವರ್ತಕ
ಮೇಲನಹಳ್ಳಿ ಬಳಿ ಮುರಿದು ಬಿದ್ದಿರುವ ವಿದ್ಯುತ್ ಪರಿವರ್ತಕ   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಉರುಳಿವೆ.

ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದಿರುವ ಕಾರಣ ಕಂಬಗಳು ಮುರಿದಿವೆ. ಹಲವೆಡೆ ವಿದ್ಯುತ್ ಪರಿವರ್ತಕಗಳಿಗೂ ಹಾನಿಯಾಗಿದೆ ಎಂದು ಬೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಬಿ. ಗವಿರಂಗಯ್ಯ ತಿಳಿಸಿದ್ದಾರೆ.

ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ತಾಲ್ಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗ ತೊಡಗಿತು. ರಾತ್ರಿಯಿಂದಲೇ ವ್ಯತ್ಯಯ ಸರಿಪಡಿಸುವ ಕೆಲಸ ಪ್ರಾರಂಭಿಸಿದರೂ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದ ಕೆಲಸಕ್ಕೆ ತೊಡಕಾಯಿತು. ಭಾನುವಾರ ಸಂಜೆ ಹೊತ್ತಿಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ವಿದ್ಯುತ್ ಸೌಕರ್ಯ ಎಂದಿನಂತೆ ಸುಸ್ಥಿತಿಗೆ ಮರಳಲಿದೆ ಎಂದರು.

ADVERTISEMENT

ತಾಲ್ಲೂಕಿನ ತಿಮ್ಮನಹಳ್ಳಿ, ಶೆಟ್ಟಿಕೆರೆ, ಹುಳಿಯಾರು, ಚಿ.ನಾ. ಹಳ್ಳಿ ಹಾಗೂ ಇತರೆಡೆ 70ರಿಂದ 80 ಕಂಬಗಳು ಉರುಳಿರುವ ಅಂದಾಜಿದೆ ಎಂದರು.

ಮರ ಬಿದ್ದು ವಿದ್ಯುತ್ ಕಂಬ ಉರುಳಿದೆ
ಬೆಸ್ಕಾಂ ಕಚೇರಿ ಆವರಣದಲ್ಲಿರುವ ವಿದ್ಯುತ್ ಕಂಬ ಮುರಿದು ತಾ.ಪಂ. ಕಚೇರಿ ಆವರಣ ಗೋಡೆ ಮೇಲೆ ಬಿದ್ದಿದೆ
ಜೋಗಿಹಳ್ಳಿ ರಸ್ತೆಯಲ್ಲಿ ಮುರಿದು ಬಿದ್ದಿರುವ ವಿದ್ಯುತ್ ಕಂಬವನ್ನು ಬದಲಿಸಿ ಸಂಪರ್ಕ ಕಲ್ಪಿಸುತ್ತಿರುವುದು
ಎನ್.ಬಿ. ಗವಿರಂಗಯ್ಯ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಬೆಸ್ಕಾಂ ಚಿಕ್ಕನಾಯಕನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.