ADVERTISEMENT

ಮಧುಮೇಹಿಗೆ ಉಚಿತ ಚಪಾತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 10:30 IST
Last Updated 3 ಏಪ್ರಿಲ್ 2020, 10:30 IST
ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಚಪಾತಿ ಬಡಿಸಲಾಯಿತು
ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಚಪಾತಿ ಬಡಿಸಲಾಯಿತು   

ತುಮಕೂರು: ನಗರದಲ್ಲಿರುವ ನಾಲ್ಕು ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧುಮೇಹಿಗಳಿಗೆ ಉಚಿತವಾಗಿ ಚಪಾತಿ ನೀಡಲಾಗುತ್ತಿದೆ.

ನಿತ್ಯ ಅನ್ನವನ್ನು ಊಟ ಮಾಡುತ್ತಿದ್ದೇವೆ. ಅನಾರೋಗ್ಯ ಹೆಚ್ಚುತ್ತಿದೆ ಎಂದು ರೋಗಿಗಳು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್‌ಗೆ ಅಳಲು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರದಿಂದ ಚಪಾತಿ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಮಹಾನಗರ ಪಾಲಿಕೆ ವ್ಯವಸ್ಥಾಪಕ ಮಹೇಶ್ ಅವರು ನಿತ್ಯ‌ ಉಚಿತವಾಗಿ 100 ಚಪಾತಿ ಪೂರೈಸುತ್ತಿದ್ದಾರೆ.

ADVERTISEMENT

ಪಾಲಿಕೆ ಆಯುಕ್ತ ಟಿ.ಭೂಬಾಲನ್ ನಿರ್ದೇಶನದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ದಾನಿಗಳು ಸಹ ಚಪಾತಿಯನ್ನು ಕ್ಯಾಂಟೀನ್‌ಗೆ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.