ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯ ಮುಕ್ತಿಧಾಮದ ಬಳಿ ಕೀರ್ತಿಕುಮಾರ್ ಎಂಬವವರ ತೋಟದಲ್ಲಿದ್ದ ಅಡಿಕೆ, ಬಾಳೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ.
2 ವರ್ಷಗಳಿಂದ ಬೆಳೆಸಿದ್ದ ಐದು ನೂರಕ್ಕೂ ಹೆಚ್ಚಿನ ಅಡಿಕೆ ಸಸಿಗಳು, ಹತ್ತಾರು ಬಾಳೆ ಗಿಡಗಳು, ಹನಿ ನೀರಾವರಿ ಉಪಕರಣಗಳು, ಪೈಪ್ಗಳನ್ನು ಕತ್ತರಿಸಿದ್ದಾರೆ. ವಾಟರ್ ಟ್ಯಾಂಕ್ ಹಾಳು ಮಾಡಿದ್ದಾರೆ. ತೋಟದಲ್ಲಿದ್ದ ಒಂದು ಸಿಂಥೆಟಿಕ್ ಟ್ಯಾಂಕ್, ಪೈಪ್ಗಳನ್ನು ಕಳ್ಳತನ ಮಾಡಿದ್ದಾರೆ. ₹ 40,000 ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.