ADVERTISEMENT

ತಿ‍ಪಟೂರು | ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ–ಸೊಸೆ ನೀರಿನಲ್ಲಿ ಮುಳುಗಿ ಸಾವು

ಕಟ್ಟೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ, ಸೊಸೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 12:53 IST
Last Updated 14 ಫೆಬ್ರುವರಿ 2023, 12:53 IST
   

ತಿಪಟೂರು: ಕಟ್ಟೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ, ಸೊಸೆ ನೀರಿನಲ್ಲಿ ಮುಳುಗಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

ಟಿ.ಎಂ.ಮಂಜುನಾಥ ನಗರದ ರಾಜಣ್ಣ ಅವರ ಪತ್ನಿ ಅನಸೂಯಮ್ಮ (50), ಪುತ್ರ ರಘು ಪತ್ನಿ ಚಂದ್ರಿಕಾ (25) ಮೃತಪಟ್ಟವರು.

ಟಿ.ಎಂ.ಮಂಜುನಾಥ ನಗರದ ಹಿಂಭಾಗದ ಕಟ್ಟೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ADVERTISEMENT

ಮನೆಗೆ ವಾಪಸ್ ಬಾರದನ್ನು ಗಮನಿಸಿದ ಕುಟುಂಬದವರು ರಾತ್ರಿ ಹುಡುಕಾಟ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.