ADVERTISEMENT

ಆನ್‌ಲೈನ್ ಸಂಚಿಕೆ ‘ಅವಲೋಕನ’ ಅನಾವರಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 5:55 IST
Last Updated 20 ಅಕ್ಟೋಬರ್ 2022, 5:55 IST
‘ಅವಲೋಕನ’ವನ್ನು ಯೋಗೀಶ್ ಭಟ್ ಅನಾವರಣಗೊಳಿಸಿದರು
‘ಅವಲೋಕನ’ವನ್ನು ಯೋಗೀಶ್ ಭಟ್ ಅನಾವರಣಗೊಳಿಸಿದರು   

ಹೆಬ್ರಿ: ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಕುರಿತು ರಚಿಸಿದ ಆನ್‌ಲೈನ್ ಸಂಚಿಕೆ ‘ಅವಲೋಕನ’ವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಉಡುಪಿ–ದಕ್ಷಿಣ ಕನ್ನಡ ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಅನಾವರಣಗೊಳಿಸಿದರು.

ಅಭಿವೃದ್ಧಿ ಸಮಿತಿ ಸದಸ್ಯರಾದ ಗುರುದಾಸ್ ಶೆಣೈ, ನರೇಂದ್ರ ನಾಯಕ್, ಕಾಲೇಜು ಪ್ರಾಂಶುಪಾಲ ಡಾ.ಪ್ರಸಾದ್ ರಾವ್ ಎಂ, ಟಿ.ಜಿ.
ಆಚಾರ್ಯ ಹೆಬ್ರಿ, ಡಾ.ಗಣಪತಿ ಹೆಚ್‌ ಎ, ಅವಲೋಕನದ ಸಂಚಾಲಕ ವಿಷ್ಣುಮೂರ್ತಿ ಪ್ರಭು, ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಗುಳಿಬೆಟ್ಟು ಸುರೇಶ ಶೆಟ್ಟಿ, ದೀಪಕ್‌ ಎನ್‌.ದುರ್ಗಾ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT