ADVERTISEMENT

ಉಡುಪಿ: ಪ್ರವಾಸಿಗರಿದ್ದ ದೋಣಿ ಮಗುಚಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 9:30 IST
Last Updated 26 ಜನವರಿ 2026, 9:30 IST
   

ಉಡುಪಿ: ಪ್ರವಾಸಿಗರ ದೋಣಿಯೊಂದು ಮಗುಚಿದ ಪರಿಣಾಮವಾಗಿ ಇಬ್ಬರು ಮೃತಪಟ್ಟ ಘಟನೆ ಕೋಡಿಬೆಂಗ್ರೆ ಅಳಿವೆ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಶಂಕರಪ್ಪ (22), ಸಿಂಧು (23) ಮೃತಪಟ್ಟವರು. ಧರ್ಮರಾಜ ಮತ್ತು ದಿಶಾ ಎಂಬುವವರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆಲ್ಟಾ ಬೀಚ್‌ ಪಾಯಿಂಟ್‌ನಿಂದ 14 ಮಂದಿ ಪ್ರವಾಸಿಗರು ದೋಣಿಯಲ್ಲಿ ತೆರಳಿದ್ದರು. ಹಂಗಾರಕಟ್ಟೆಯ ಸಮೀಪ ಮಧ್ಯಾಹ್ನ ದೋಣಿ ಮುಗುಚಿದೆ. ದೋಣಿಯಲ್ಲಿದ್ದ ಕೆಲವರು ಲೈಫ್‌ಜಾಕೆಟ್‌ ಧರಿಸಿರಲಿಲ್ಲ ಎಂದು ತಿಳಿದು ಬಂದಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ.

ADVERTISEMENT

ದೋಣಿಯಲ್ಲಿದ್ದವರು ಮೈಸೂರಿನ ಸರಸ್ವತಿಪುರದ ಕಾಲ್‌ಸೆಂಟರ್‌ನ ನೌಕರರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.