ಉಡುಪಿ: ಸಿಇಟಿಯಲ್ಲಿ ಉಡುಪಿಯ ಅವಳಿ ಸಹೋದರರಾದ ವ್ರಜೇಶ್ ವೀಣಾಧರ ಶೆಟ್ಟಿ ಹಾಗೂ ವೃಷಾನ್ ವೀಣಾಧರ ಶೆಟ್ಟಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ವ್ರಜೇಶ್ ಬಿಎನ್ವೈಎಸ್ನಲ್ಲಿ 2, ಅಗ್ರಿಕಲ್ಚರ್ನಲ್ಲಿ 9, ವೆಟರ್ನರಿ ಸೈನ್ಸ್ನಲ್ಲಿ 6 ಹಾಗೂ ಫಾರ್ಮಸಿಯಲ್ಲಿ 7ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ವೃಷಾನ್ ಬಿಎನ್ವೈಸ್ನಲ್ಲಿ 5, ವೆಟರ್ನರಿ ಸೈನ್ಸ್ನಲ್ಲಿ 5 ಹಾಗೂ ಫಾರ್ಮಸಿಯಲ್ಲಿ 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ವೃಷಾನ್ ಹಾಗೂ ವ್ರಜೇಶ್ ಮಣಿಪಾಲದ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿಗಳಾಗಿದ್ದು ರೇಖಾ ವೀಣಾಧರ ಶೆಟ್ಟಿ ಹಾಗೂ ವೀಣಾಧರ ಶೆಟ್ಟಿ ದಂಪತಿ ಪುತ್ರರು.
ಇಬ್ಬರೂ ನೀಟ್ ಪರೀಕ್ಷೆಯನ್ನು ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮುಂದೆ ವೈದ್ಯರಾಗುವ ಅಭಿಲಾಷೆ ಹೊಂದಿದ್ದಾರೆ ಎಂದು ತಾಯಿ ರೇಖಾ ತಿಳಿಸಿದರು.
ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ಉತ್ತಮ ತಯಾರಿ ನಡೆಸಿದ್ದರು. ನಿರೀಕ್ಷೆಯಂತೆ ಫಲಿತಾಂಶ ಬಂದಿದೆ ಎಂದು ತಾಯಿ ರೇಖಾ ಸಂತಸ ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.