ADVERTISEMENT

ಪಡುಬಿದ್ರಿ: ಕಾಂಗ್ರೆಸ್ ತಿರಂಗಾ ಬೈಕ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 3:07 IST
Last Updated 14 ಆಗಸ್ಟ್ 2022, 3:07 IST
ಕಾಪು ಬ್ಲಾಕ್ ಕಾಂಗ್ರೆಸ್, ಯುವಕಾಂಗ್ರೆಸ್ ಕಾಪು ಬ್ಲಾಕ್ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾಪು ವಿಧಾನಸಭಾ ಕ್ಷೇತ್ರದ ದಕ್ಷಿಣ ಬ್ಲಾಕ್‌ನಲ್ಲಿ ಶನಿವಾರ ತಿರಂಗಾ ಬೈಕ್ ರ್‍ಯಾಲಿ ನಡೆಯಿತು
ಕಾಪು ಬ್ಲಾಕ್ ಕಾಂಗ್ರೆಸ್, ಯುವಕಾಂಗ್ರೆಸ್ ಕಾಪು ಬ್ಲಾಕ್ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾಪು ವಿಧಾನಸಭಾ ಕ್ಷೇತ್ರದ ದಕ್ಷಿಣ ಬ್ಲಾಕ್‌ನಲ್ಲಿ ಶನಿವಾರ ತಿರಂಗಾ ಬೈಕ್ ರ್‍ಯಾಲಿ ನಡೆಯಿತು   

ಕಾಪು (ಪಡುಬಿದ್ರಿ): ಕಾಪು ಬ್ಲಾಕ್ ಕಾಂಗ್ರೆಸ್, ಯುವಕಾಂಗ್ರೆಸ್ ಕಾಪು ಬ್ಲಾಕ್ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾಪು ವಿಧಾನಸಭಾ ಕ್ಷೇತ್ರದ ದಕ್ಷಿಣ ಬ್ಲಾಕ್‌ನಲ್ಲಿ ಶನಿವಾರ ತಿರಂಗಾ ಬೈಕ್ ರ್‍ಯಾಲಿ ನಡೆಯಿತು.

ಹೆಜಮಾಡಿಯಲ್ಲಿ ರ್‍ಯಾಲಿಗೆ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಹಿದಾಯತ್ ಆಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಚಾಲನೆ ನೀಡಿದರು.

ಹೆಜಮಾಡಿಯಲ್ಲಿ ಚಾಲನೆಗೊಂಡ ರ್‍ಯಾಲಿಯು ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮೂಳೂರು, ಕಾಪು, ಪಾಂಗಾಳ, ಕಟಪಾಡಿ ಮೂಲಕ ಉದ್ಯಾವರದಲ್ಲಿ ಸಮಾಪ್ತಿಗೊಂಡಿತು.

ADVERTISEMENT

ವಿನಯಕುಮಾರ್ ಸೊರಕೆ ಮಾತನಾಡಿ, ‘ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಬೈಕ್ ರ್‍ಯಾಲಿ ಈ ಕಾರ್ಯಕ್ರಮವನ್ನು ಶಾಂತಿ ಸಾಮರಸ್ಯ ಸೌಹಾರ್ದತೆಯ ದ್ಯೋತಕವಾಗಿ ಹಮ್ಮಿಕೊಳ್ಳಲಾಗಿದೆ’ ಎಂದರು.

ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ರಾಜ್ಯ ಕಾಂಗ್ರೆಸ್ ಕೋರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಅಬ್ದುಲ್ ಅಜೀಜ್ ಹೆಜಮಾಡಿ, ಕಾಪು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ನೇಹಲತಾ ಶೆಟ್ಟಿ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾಧಿಕ್ ದಿನಾರ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಮಾಧ್ಯಮ ವಿಭಾಗದ ಹರೀಶ್ ನಾಯಕ್ ಕಾಪು, ಸೌರಭ್ ಬಳ್ಳಾಲ್, ದೀಪಕ್ ಎರ್ಮಾಳು, ದೇವಿಪ್ರಸಾದ್ ಶೆಟ್ಟಿ, ಹರೀಶ್ ಕಿಣಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಹರೀಶ್ ನಾಯಕ್, ಕಿಶೋರ್ ಎರ್ಮಾಳು, ಸಂತೋಷ್ ಕುಲಾಲ್, ವೈ. ಸುಧೀರ್, ವಿನಯ್ ಬಳ್ಳಾಲ್, ಕರುಣಾಕರ ಕನ್ನಂಗಾರ್, ಸುಧೀರ್ ಹೆಜಮಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.