ADVERTISEMENT

ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಸಹಕಾರಿ: ಶಾಸಕ ಗುರುರಾಜ್ ಗಂಟಿಹೊಳೆ

ಸೆಳ್ಕೋಡಿನಲ್ಲಿ ಹೈಟೆಕ್ ಶೌಚಾಲಯ ಶಿಲಾನ್ಯಾಸ ಹಾಗೂ ಶೈಕ್ಷಣಿಕ ಕಲಿಕಾ ತಂತ್ರಾಂಶ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:20 IST
Last Updated 6 ನವೆಂಬರ್ 2025, 6:20 IST
ಕುಂದಾಪುರ ಸಮೀಪದ ಸೆಳ್ಕೋಡು ಸರ್ಕಾರಿ ಶಾಲೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರು, ಹೈಟೆಕ್ ಶೌಚಾಲಯ ಶಿಲಾನ್ಯಾಸ ಹಾಗೂ ಶೈಕ್ಷಣಿಕ ಕಲಿಕಾ ತಂತ್ರಾಂಶ ಬಿಡುಗಡೆ ಮಾಡಿದರು
ಕುಂದಾಪುರ ಸಮೀಪದ ಸೆಳ್ಕೋಡು ಸರ್ಕಾರಿ ಶಾಲೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರು, ಹೈಟೆಕ್ ಶೌಚಾಲಯ ಶಿಲಾನ್ಯಾಸ ಹಾಗೂ ಶೈಕ್ಷಣಿಕ ಕಲಿಕಾ ತಂತ್ರಾಂಶ ಬಿಡುಗಡೆ ಮಾಡಿದರು   

ಕುಂದಾಪುರ: ‘ಸರ್ಕಾರಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಜೊತೆಗೆ ಸಂಸ್ಥೆಗಳ ಸಿಎಸ್ಆರ್ ನಿಧಿ ಸಹಕಾರಿ. ಈ ನಿಟ್ಟಿನಲ್ಲಿ ಗ್ರಾಮೀಣ ಮಲೆನಾಡು ಭಾಗದ ಸರ್ಕಾರಿ ಶಾಲೆಯೊಂದಕ್ಕೆ ಬಾಲಕಿಯರ ಹೈಟೆಕ್ ಶೌಚಾಲಯ ಒದಗಿಸಿದ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಹಾಗೂ ಚೆರ್ರಿ ಲರ್ನ್ ಆಪ್ ಅನುಷ್ಠಾನಕ್ಕೆ ಪ್ರಯೋಜಕತ್ವ ನೀಡಿದ ಕೋಡ್ ಕ್ರಾಫ್ಟ್ ಟೆಕ್ನಾಲಜಿ ಸಂಸ್ಥೆಯ ಪ್ರತಿನಿಧಿಗಳು ಅಭಿನಂದನಾರ್ಹರು’ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿ ಕ್ಯಾನ್ ಫಿನ್ ಹೋಂಮ್ಸ್ ಲಿಮಿಟೆಡ್ ಇವರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಿಂದ, ಸಳ್ಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗಲಿರುವ ಬಾಲಕಿಯರ ಹೈಟೆಕ್ ಶೌಚಾಲಯದ ಭೂಮಿ ಪೂಜೆಯನ್ನು ಶಾಸಕ ಗುರುರಾಜ್ ಗಂಟಿಹೊಳೆ ಅವರು ನೆರವೇರಿಸಿ ಮಾತನಾಡಿದರು.

ಜೊತೆಗೆ ಪಠ್ಯಕ್ರಮ ಆಧಾರಿತ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಹೆಚ್ಚು ಆಕರ್ಷಕ ಮತ್ತು ಸುಲಭವಾಗಿ ಅರ್ಥವಾಗುವ ನಿಟ್ಟಿನಲ್ಲಿ ನಿರ್ಮಿಸಿರುವ ಚೆರ್ರಿ ಲರ್ನ್ ಆಪ್ ಇದರ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ADVERTISEMENT

ಎಸ್.ಡಿ.ಎಂ.ಸಿ ಅಧ್ಯಕ್ಷೆ ಪ್ರೇಮಾ ಎಸ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಡ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಬೆಳಾರಿ, ಉಪಾಧ್ಯಕ್ಷೆ ಭಾರತಿ ಜಿ ಶೆಟ್ಟಿ, ಪಂಚಾಯಿತಿ ಸದಸ್ಯರಾದ ನಾರಾಯಣ ಶೆಟ್ಟಿ, ಚಂದ್ರ ಮೋಹನ್, ಸುಲ್ಯಾ ಭೋವಿ, ಸುನೀತಾ, ಪಾರ್ವತಿ, ವನಜಾಕ್ಷಿ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ನಾಗೇಶ್ ನಾಯ್ಕ, ಕೋಡ್ ಕ್ರಾಫ್ಟ್ ಟೆಕ್ನಾಲಜಿ ಸಂಸ್ಥೆಯ ಪ್ರವೀಣ್ ಕ್ಯಾಸ್ಟಲಿನೊ, ಜೋಬಿನ್ ಜೋಸೆಫ್, ಚೆರ್ರಿ ಲರ್ನ್ ಸಂಸ್ಥೆಯ ಸಿಇಒ ಶ್ರೀನಿಧಿ ಆರ್.ಎಸ್, ಶಾಲಾ ಸುವರ್ಣ ವಿದ್ಯಾನಿಧಿ ಅಧ್ಯಕ್ಷ ಸುರೇಂದ್ರ ನಾಯ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಕ್ಷತ್ರ ನಾಯ್ಕ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪೂರ್ಣಿಮಾ ಶೆಟ್ಟಿ, ಶಿಕ್ಷಣ ಇಲಾಖೆಯ ಸಿಆರ್‌ಪಿ ಶೈಲಜಾ, ಗಣೇಶ್ ಶೆಟ್ಟಿ ಅತ್ತಿಕಾರು ಇದ್ದರು.

ಮುಖ್ಯ ಶಿಕ್ಷಕ ಭಾಸ್ಕರ್ ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸಂತೋಷ್ ಕುಮಾರ್ ವಂದಿಸಿದರು. ಸತೀಶ್ ದೇವಾಡಿಗ ನಿರೂಪಿಸಿದರು.