ADVERTISEMENT

ಏರ್‌ಗನ್‌ನಿಂದ ನಾಯಿಯ ಹತ್ಯೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 16:38 IST
Last Updated 15 ಫೆಬ್ರುವರಿ 2021, 16:38 IST

ಪ್ರಜಾವಾಣಿ ವಾರ್ತೆ

ಉಡುಪಿ: ಏರ್‌ ಗನ್‌ನಿಂದ ಶೂಟ್‌ ಮಾಡಿದ ಪರಿಣಾಮ ಸಾಕುನಾಯಿ ಮೃತಪಟ್ಟಿದ್ದು ಈ ಸಂಬಂಧ ಆರೋಪಿ ಬ್ರಾನ್ ಡಿಸೋಜ ಎಂಬ ವ್ಯಕ್ತಿಯನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಫೆ.12ರಂದು ಗುಂಡಪ್ಪ ಪೂಜಾರಿ ‌ಕೆಮ್ಮಣ್ಣು ಪ್ರದೇಶದಲ್ಲಿರುವ ಹಾಲಿನ ಡೈರಿಯಿಂದ ಮೂಡುತೋನ್ಸೆಯಲ್ಲಿರುವ ಮನೆಗೆ ಹೋಗುವಾಗ ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ನಾಯಿಗೆ ಬ್ರಾನ್ ಡಿಸೋಜ ಏರ್‌ ಗನ್‌ನಿಂದ ಶೂಟ್ ಮಾಡಿದ್ದರು. ನಾಯಿಯ ಹೊಟ್ಟೆಗೆ ಬಲವಾದ ಗಾಯವಾಗಿ ಮೃತಪಟ್ಟಿತ್ತು.

ADVERTISEMENT

ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಗುಂಡಪ್ಪ ಪೂಜಾರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಶನಿವಾರ ಆರೋಪಿ ಬ್ರಾನ್ ಡಿಸೋಜಾರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅದೇ ದಿನ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.