ಬೈಂದೂರು (ಉಡುಪಿ): ಕಿರಿಮಂಜೇಶ್ವರದ ಕೊಡೇರಿ ಸಮುದ್ರತೀರದಲ್ಲಿ ಭಾನುವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಶವ ಸೋಮವಾರ ಪತ್ತೆಯಾಗಿವೆ.
ಹೊಸಹಿತ್ಲು ಬಳಿ ನಾಗರಾಜ ಖಾರ್ವಿ (55), ಕೊಡೇರಿ ಸಮೀಪದಲ್ಲಿ ಲಕ್ಷ್ಮಣ ಖಾರ್ವಿ (34) ಶೇಖರ್ ಖಾರ್ವಿ ಶವ (39) ಹಾಗೂ ಮಂಜುನಾಥ ಖಾರ್ವಿ (40) ಶವಗಳು ಪತ್ತೆಯಾಗಿವೆ.
ಭಾನುವಾರ ಶ್ರೀ ಸಾಗರ್ ಹೆಸರಿನ ದೋಣಿ ಅಲೆಗಳ ಉಬ್ಬರಕ್ಕೆ ಸಿಲುಕಿ ಬಂಡೆಗಳಿಗೆ ಅಪ್ಪಳಿಸಿ ಸಮುದ್ರದಲ್ಲಿ ಮಗುಚಿ ಬಿದ್ದಿತ್ತು. ದೋಣಿಯಲ್ಲಿದ್ದ 12 ಮೀನುಗಾರರ ಪೈಕಿ 8 ಮಂದಿಯನ್ನು ರಕ್ಷಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.