ADVERTISEMENT

ಹೆಬ್ರಿ ಶಾಂತಿನಿಕೇತನ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:13 IST
Last Updated 12 ಫೆಬ್ರುವರಿ 2026, 7:13 IST
ಕುಚ್ಚೂರು ಗ್ರಾಮದ ಶಾಸ್ತ್ರಿನಗರ ಸಳ್ಳೆ ಕಟ್ಟೆಯಲ್ಲಿ ಶಾಂತಿನಿಕೇತನದ ಕೇಂದ್ರ ಕಚೇರಿಯನ್ನು ತಂತ್ರಿ ಮಡಾಮಕ್ಕಿ ಉದ್ಘಾಟಿಸಿದರು
ಕುಚ್ಚೂರು ಗ್ರಾಮದ ಶಾಸ್ತ್ರಿನಗರ ಸಳ್ಳೆ ಕಟ್ಟೆಯಲ್ಲಿ ಶಾಂತಿನಿಕೇತನದ ಕೇಂದ್ರ ಕಚೇರಿಯನ್ನು ತಂತ್ರಿ ಮಡಾಮಕ್ಕಿ ಉದ್ಘಾಟಿಸಿದರು   

ಹೆಬ್ರಿ: ಗ್ರಾಮೀಣ ಭಾಗದ ಶಾಂತಿನಿಕೇತನ ಸಂಸ್ಥೆಯು ಜನರಿಗೆ ಉತ್ತಮ ಆರ್ಥಿಕ ಸೇವೆ ನೀಡುತ್ತಿದೆ. ಆರ್ಥಿಕ ಚೌಕಟ್ಟಿನಲ್ಲಿ ಸಾಮಾಜಿಕ ಚಿಂತನೆ ಅಳವಡಿಸಿಕೊಂಡು ಚಟುವಟಿಕೆ ನಡೆಸುತ್ತಿರುವ ಸಂಘವು ಜನಮಾನಸದಲ್ಲಿ ಉಳಿದಿದೆ ಎಂದು ತಂತ್ರಿ ವೇದವ್ಯಾಸ ತಂತ್ರಿ ಮಡಾಮಕ್ಕಿ ಹೇಳಿದರು.

ಕುಚ್ಚೂರು ಗ್ರಾಮದ ಶಾಸ್ತ್ರಿನಗರ ಸಳ್ಳೆಕಟ್ಟೆಯಲ್ಲಿ ನಿರ್ಮಾಣವಾದ ಶಾಂತಿನಿಕೇತನದ ಕೇಂದ್ರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಶಾಂತಿನಿಕೇತನ ಸಹಕಾರಿ ಸಂಘದ ಉಪಾಧ್ಯಕ್ಷ ದೀಕ್ಷಿತ್ ನಾಯಕ್, ಸಿಇಒ ನರೇಂದ್ರ ಎಸ್. ಮರಸಣಿಗೆ, ಆಡಳಿತ ಮಂಡಳಿ ಸದಸ್ಯರಾದ ಕೆ. ಗಣೇಶ್, ಸುಜಾತಾ ಶೆಟ್ಟಿ, ರಘುರಾಮ ಶೆಟ್ಟಿ, ವ್ಯವಸ್ಥಾಪಕಿ ರಾಜಶ್ರೀ, ಸದಸ್ಯರು, ವಿದ್ಯಾರ್ಥಿ ಘಟಕದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT