ಉಡುಪಿ: ನಗರದ ಸುಲ್ತಾನ್ ಗೋಲ್ಡ್ ಚಿನ್ನಾಭರಣ ಮಾರಾಟ ಮಳಿಗೆಯ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡಸಿ ಪರಿಶೀಲಿನೆ ನಡೆಸಿದರು.
ಬೆಳಿಗ್ಗೆ ಕಾರಿನಲ್ಲಿ ಏಕಾಏಕಿ ಬಂದ ಅಧಿಕಾರಿಗಳ ತಂಡ ಚಿನ್ನಾಭರಣ ಮಳಿಗೆಯಲ್ಲಿ ತೀವ್ರ ತಪಾಸಣೆ ನಡೆಸಿತು. ದಾಖಲೆ ಪತ್ರಗಳನ್ನು ಪರಿಶೀಲಿಸಿತು.
ಈ ಸಂದರ್ಭ ಮಳಿಗೆಯಲ್ಲಿದ್ದ ಗ್ರಾಹಕರನ್ನು ವ್ಯವಹಾರ ಮುಗಿದ ಬಳಿಕ ಹೊರಗೆ ಕಳುಹಿಸಲಾಯಿತು. ಬಳಿಕ ಚಿನ್ನಾಭರಣ ಖರೀದಿಗೆ ಬಂದ ಗ್ರಾಹಕರಿಗೆ ಒಳಗೆ ಬಿಡಲಿಲ್ಲ.
ದಾಳಿಯ ಉದ್ದೇಶ ತಿಳಿದು ಬಂದಿಲ್ಲ. ಸಿಬ್ಬಂದಿಯಿಂದ ಅಧಿಕಾರಿಗಳು ಮಾಹಿತಿಗಳನ್ನು ಪಡೆದರು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.