ADVERTISEMENT

ಜಯಂತ್ ಕಾಯ್ಕಿಣಿಗೆ ವಿಶ್ವಪ್ರಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 13:27 IST
Last Updated 20 ಜನವರಿ 2024, 13:27 IST
<div class="paragraphs"><p>ಜಯಂತ್ ಕಾಯ್ಕಿಣಿ</p></div>

ಜಯಂತ್ ಕಾಯ್ಕಿಣಿ

   

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪ್ರಭಾವತಿ ಹಾಗೂ ವಿಶ್ವನಾಥ ಶೆಣೆೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರಕ್ಕೆ ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಹೆಬ್ರಿಯ ರಾಘವೇಂದ್ರ ಚಾರಿಟೆಬಲ್‌ ಟ್ರಸ್ಟ್ ಪ್ರಾಯೋಜಿತ ಶಾರದಾ ಕೃಷ್ಣ ಪುರಸ್ಕಾರಕ್ಕೆ ಕಲಾವಿದ ಕಾಸರಗೋಡು ಚಿನ್ನಾ ಅವರನ್ನು ಆಯ್ಕೆ ಮಾಡಲಾಗಿದೆ.

ವಿಶ್ವಪ್ರಭಾ ಪುರಸ್ಕಾರ ₹ 1 ಲಕ್ಷ ನಗದು ಹಾಗೂ ಶಾರದಾ ಕೃಷ್ಣ ಪುರಸ್ಕಾರ ₹ 25,000 ನಗದು ಸಹಿತ ಪ್ರಶಸ್ತಿ ಫಲಕ ಒಳಗೊಂಡಿದೆ. ಜ.23 ಹಾಗೂ 24ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ನಾಗರಾಜ್ ಹೆಬ್ಬಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ, ಡಾ.ಎಚ್.ಎಸ್.ಶೆಟ್ಟಿ, ಸದಾನಂದ ಶೆಣೆೈ ಹಾಗೂ ಸುಗುಣಾ ಸುವರ್ಣ, ವಿದ್ವಾಂಸ ಪ್ರೊ.ಕೆ.ಪಿ ರಾವ್, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಹರೀಶ್ಚಂದ್ರ, ಮುಂಬೈನ ಮನೋಹರ್ ನಾಯಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲಾವಿದ ತೇಜಸ್ವಿ ಅನಂತ್ ಅವರಿಂದ ಪಿಕ್ಸೆಲ್ ಪೋಯಿ, ಯೂನಿ ಸೈಕ್ಲಿಂಗ್, ಜಗಲಿಂಗ್ ಕಲಾ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು

ಕಾಸರಗೋಡು ಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.