ADVERTISEMENT

ಟೋಲ್‌ ಸಂಗ್ರಹ ವಿರೋಧಿ ಹೋರಾಟ: ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 6:44 IST
Last Updated 23 ಆಗಸ್ಟ್ 2024, 6:44 IST
ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಟೋಲ್‌ ಸಂಗ್ರಹ ಆದೇಶದ ವಿರುದ್ಧ ಹೋರಾಟದ ಪೂರ್ವಭಾವಿ ಸಭೆ ಬಿಜೆಪಿಯ ವಿಕಾಸ ಕಚೇರಿಯಲ್ಲಿ ಬುಧವಾರ ನಡೆಯಿತು.
ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಟೋಲ್‌ ಸಂಗ್ರಹ ಆದೇಶದ ವಿರುದ್ಧ ಹೋರಾಟದ ಪೂರ್ವಭಾವಿ ಸಭೆ ಬಿಜೆಪಿಯ ವಿಕಾಸ ಕಚೇರಿಯಲ್ಲಿ ಬುಧವಾರ ನಡೆಯಿತು.   

ಕಾರ್ಕಳ: ಕಾರ್ಕಳ– ಬೆಳ್ಮಣ್– ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಟೋಲ್‌ ಸಂಗ್ರಹ ಆದೇಶದ ವಿರುದ್ಧ ಹೋರಾಟದ ಪೂರ್ವಭಾವಿ ಸಭೆ ಬಿಜೆಪಿಯ ವಿಕಾಸ ಕಚೇರಿಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ಪ್ರಮುಖರೊಂದಿಗೆ ಬುಧವಾರ ನಡೆಯಿತು.

ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಮಾತನಾಡಿ, ರಾಜ್ಯ ಸರ್ಕಾರ ಟೋಲ್‌ ಸಂಗ್ರಹಕ್ಕೆ ಆದೇಶ ಮಾಡಿರುವುದನ್ನು ಬಿಜೆಪಿ ವಿರೋಧಿಸುತ್ತದೆ, ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸುತ್ತದೆ. ಈ ಬಗ್ಗೆ 24ರಂದು ನಂದಳಿಕೆ ಸುಹಾಸ್‌ ಹೆಗ್ಡೆ ನೇತೃತ್ವದಲ್ಲಿ ಸ್ಥಳೀಯ ಟೋಲ್‌ ಸಂಗ್ರಹ ವಿರೋಧಿ ಹೋರಾಟ ಸಮಿತಿಯ ಸಾರ್ವಜನಿಕ ಪ್ರತಿಭಟನೆಗೆ ಪ್ರತಿ ಗ್ರಾಮದಿಂದ ಒಂದು ಬಸ್‌ ಮೂಲಕ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಲಾಗುವುದು. ಕಾರ್ಕಳದಿಂದ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವರು ಎಂದು ತಿಳಿಸಿದರು.

ಬಿಜೆಪಿ ಪ್ರಮುಖರಾದ ಮಹಾವೀರ ಹೆಗ್ಡೆ, ರೇಶ್ಮಾ ಉದಯ್‌ ಶೆಟ್ಟಿ, ಬೋಳ ಸತೀಶ್‌ ಪೂಜಾರಿ, ಪ್ರವೀಣ್‌ ಸಾಲ್ಯಾನ್‌, ಜಯರಾಮ್‌ ಸಾಲ್ಯಾನ್‌, ದಯಾನಂದ ಹೆಗ್ಡೆ ಕಡ್ತಲ, ಹರ್ಷವರ್ಧನ್‌ ನಿಟ್ಟೆ, ದೇವೇಂದ್ರ ಶೆಟ್ಟಿ, ಅನಂತಕೃಷ್ಣ ಶೆಣೈ, ಸೂರ್ಯಕಾಂತ್‌ ಶೆಟ್ಟಿ, ಸರ್ವಜ್ಞ ತಂತ್ರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.