ಕಾರ್ಕಳ: ತಾಲ್ಲೂಕಿನ ಕಾಂತಾವರದ ಯಕ್ಷದೇಗುಲದ ವತಿಯಿಂದ ಯಕ್ಷಗಾನ ಕ್ಷೇತ್ರದ ನಿವೃತ್ತ ಹಿರಿಯ ಕಲಾವಿದ ಡಾ. ಕೊಳ್ಯೂರು ರಾಮಚಂದ್ರರಾಯರಿಗೆ ಯಕ್ಷದೇಗುಲ ವಿಂಶತಿ ಪುರಸ್ಕಾರ, ಧರ್ಮಸ್ಥಳ ಮೇಳದ ವಸಂತ ಗೌಡ ಕಾಯರ್ತಡ್ಕ ಅವರಿಗೆ ದಿ. ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ಹಾಗೂ ಸಾಣೂರು ಗಣೇಶ ಶೆಟ್ಟಿ ಅವರಿಗೆ ವಿಂಶತಿ ಯುವ ಪುರಸ್ಕಾರನೀಡಿ ಗೌರವಿಸಲಾಗುವುದುಎಂದು ಸಂಸ್ಥೆಯ ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ತಿಳಿಸಿದ್ದಾರೆ.
ಯಕ್ಷ ದೇಗುಲವು ಗ್ರಾಮೀಣ ಪ್ರದೇಶದಲ್ಲಿ ಆಟ- ಕೂಟ, ಶಿಕ್ಷಣ ಶಿಬಿರ, ಬಣ್ಣಗಾರಿಕೆ ಕಮ್ಮಟ ಹೀಗೆ ಯಕ್ಷಗಾನ ಕಲೆಗಾಗಿ, ಕಲಾವಿದನಿಗಾಗಿ, ಕಲಾಸೇವೆ ಗೈಯುತ್ತಾ ಬರುತ್ತಿದೆ. ಸಂಸ್ಥೆಯ ತೀರ್ಪುಗಾರರ ಸಮಿತಿಯಿಂದ ಆಯ್ಕೆ ಮಾಡಲಾದ ಈ ಪ್ರಶಸ್ತಿ ವಿತರಣೆ ಮುಂದಿನ ಜುಲೈ 24ರಂದು ದಿನಪೂರ್ತಿ ನಡೆಯಲಿರುವ ಯಕ್ಷೋಲ್ಲಾಸ - ಸಂಭ್ರಮದಲ್ಲಿ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.