ADVERTISEMENT

ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 8:42 IST
Last Updated 9 ಡಿಸೆಂಬರ್ 2021, 8:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಅಳಿಯ.

ಕಾರ್ಕಳದ ದಿ.ಪಿಲಿಪ್ಸ್ ಮಿನೇಜಸ್ ಹಾಗೂ ಮೇರಿ ಮಿನೇಜಸ್ ಅವರ ಪುತ್ರಿ ಪ್ರಫುಲ್ಲ ಮಿನೇಜಸ್ ಅವರನ್ನು ಹರ್ಜಿಂದರ್ ಸಿಂಗ್ 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ದೆಹಲಿಯಲ್ಲಿ ನೆಲೆಸಿದ್ದ ಹರ್ಜಿಂದರ್ ಸಿಂಗ್ ಹಾಗೂ ಪ್ರಫುಲ್ಲ ಮೂರ್ನಾಲ್ಕು ವರ್ಷಗಳ ಹಿಂದೆ ಕಾರ್ಕಳಕ್ಕೆ ಭೇಟಿ ನೀಡಿದ್ದರು ಎಂದು ಹರ್ಜಿಂದರ್ ಸಿಂಗ್ ಭಾವ ವಲೇರಿಯನ್ ಮಾಹಿತಿ ನೀಡಿದರು. ಸೌಮ್ಯ ಸ್ವಭಾವದವರಾಗಿದ್ದಹರ್ಜಿಂದರ್ ಸಿಂಗ್ ಎಲ್ಲರೊಟ್ಟಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು.

ಬುಧವಾರ ಸಂಜೆ ಅವರು ಮೃತಪಟ್ಟ ಸುದ್ದಿ ಅಧಿಕೃತವಾಗಿ ಖಚಿತವಾಯಿತು‌. ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ ಎಂದು ವಲೇರಿಯನ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.