ADVERTISEMENT

ಶಿರ್ವ: ಸಿಡಿಲು ಬಡಿದು ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 6:03 IST
Last Updated 8 ಜೂನ್ 2021, 6:03 IST

ಶಿರ್ವ: ಕುರ್ಕಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟಕಲ್ಲು ಸಮೀಪದ ದುರ್ಗಾನಗರ ನಿವಾಸಿ ಡೇನಿಸ್ ಡಿಸೋಜ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ವಿದ್ಯುತ್ ಸ್ವಿಚ್, ಟಿ.ವಿ, ಫ್ಯಾನ್‍ಗಳು, ಶೋಕೇಸ್, ವೈರಿಂಗ್ ಸುಟ್ಟುಹೋಗಿವೆ. ಮನೆಯ ಗೋಡೆ ಬಿರುಕು ಬಿಟ್ಟಿದೆ.

ಡೇನಿಸ್ ಡಿಸೋಜ ಅವರ ತಲೆ, ಮೈಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯಿಂದ ₹ 45 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕುರ್ಕಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಶೆಟ್ಟಿ, ಉಪಾಧ್ಯಕ್ಷೆ ಸಿಮ್ಮಿ ಮಾರ್ಗರೆಟ್ ಡಿಸೋಜ, ವಾರ್ಡ್ ಸದಸ್ಯೆ ಸರೋಜಾ ಪೂಜಾರಿ, ಗ್ರಾಮ ಕರಣಿಕ ಲೆಸ್ಟನ್, ಪಂಚಾಯಿತಿ ಸಿಬ್ಬಂದಿ ಸತೀಶ್ ಪೂಜಾರಿ, ನತಾಲಿಯನ್ ಮಾರ್ಟಿಸ್‌ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT