ಕೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂನಮ್ಮೊಳಗೆ ಸಾಹಿತ್ಯಾವಲೋಕ ಕಾರ್ಯಕ್ರಮ ನಡೆಯಿತು.
ಕೋಟ (ಬ್ರಹ್ಮಾವರ): ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಮಿತ್ರ ಮಂಡಳಿ, ಕೋಟೇಶ್ವರದ ಸ್ಥಿತಿ ಗತಿ ತ್ರೈಮಾಸಿಕ ಪತ್ರಿಕೆ ಆಶ್ರಯದಲ್ಲಿ ನಂ ನಮ್ಮೊಳಗೆ ಸಾಹಿತ್ಯಾವಲೋಕ ಕಾರ್ಯಕ್ರಮ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶ್ರೀಕೃಷ್ಣ ಐತಾಳ, ಮಾಧುರಿ, ಲಕ್ಷೀ ಜಿ, ಗುಂಡ್ಮಿ ರಾಮಚಂದ್ರ ಐತಾಳ, ನಾಗೇಶ ಮಯ್ಯ, ಸುಮನಾ ಹೇರ್ಳೆ, ನಾಗರತ್ನ ಹೇರ್ಳೆ, ಮುಕಾಂಬಿಕಾ, ಡಾ.ಸರಿತಾ, ಮಹಾಲಕ್ಷ್ಮೀ ಸೋಮಯಾಜಿ, ಗಣೇಶ ಮೂರ್ತಿ ಹೆಬ್ಬಾರ್, ಪಾರಂಪಳ್ಳಿ ನರಸಿಂಹ ಐತಾಳ, ಪ್ರೊ.ಉಪೇಂದ್ರ ಸೋಮಯಾಜಿ, ಗಿಳಿಯಾರು ಸೋಮಶೇಖರ ಶೆಟ್ಟಿ, ಲಕ್ಷ್ಮೀ ಜಿ. ಕುಚ್ಚೂರು, ಸೂರ್ಯನಾರಾಯಣ ಚಿತ್ರಪಾಡಿ ಅವರು ಸ್ವರಚಿತ ಕಥೆ ವಾಚನ, ಅವುಗಳಿಗೆ ಪ್ರತಿಕ್ರಿಯೆ, ಓದಿದ ಪುಸ್ತಕ ಪರಿಚಯ, ಕಿರು ಹಾಸ್ಯ ಲೇಖನ ವಾಚನ, ಗೀತವಾಚನ ಕಾರ್ಯಕ್ರಮ ನಡೆಸಿಕೊಟ್ಟರು.
ಮುಂಜುನಾಥ ಉಪಾಧ್ಯ ಸಮನ್ವಯಗೊಳಿಸಿ ವಂದಿಸಿದರು. ಮಹಾಲಕ್ಷ್ಮಿ ಸೋಮಯಾಜಿ ಅವರ ತಂಡದಿಂದ ರಂಗಗೀತೆಗಳ ಗಾಯನ ನಡೆಯಿತು.
ಮನೋಹರ ಪಿ, ವಿಜಯಲಕ್ಷ್ಮೀ, ರಾಘವ ಶೆಟ್ಟಿ, ವಿಶ್ವನಾಥ ಖಾರ್ವಿ ಭಾಗವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಉಪೇಂದ್ರ ಸೋಮಯಾಜಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.