ಉಡುಪಿ: ಬಡಗುತಿಟ್ಟಿನ ಮದ್ದಲೆ ವಾದಕರಾಗಿ ವಿವಿಧ ಮೇಳಗಳಲ್ಲಿ ದುಡಿದಿದ್ದ ಮಹಾಬಲೇಶ್ವರ ಶೇಟ್ (83) ಮಂಗಳವಾರ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಉಪ್ಪಿನಕುದ್ರು ಗೊಂಬೆಯಾಟದ ಮೇಳದಲ್ಲಿ ನಾಲ್ಕು ದಶಕಗಳ ಕಲಾಸೇವೆ ಮಾಡಿದ್ದ ಮಹಾಬಲೇಶ್ವರ ಶೇಟ್ಗೊಂಬೆಯಾಟದ ಮೇಳದೊಂದಿಗೆ ಹಲವು ದೇಶಗಳನ್ನು ಸುತ್ತಿದ್ದರು. ಅವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಸೇರಿ ಹಲವು ಪುರಸ್ಕಾರಗಳು ಸಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.