ADVERTISEMENT

ಕಾರ್ಕಳ: ಸಿಡಿಲು ಬಡಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 14:08 IST
Last Updated 25 ಏಪ್ರಿಲ್ 2022, 14:08 IST
ವಿಜಿತ್
ವಿಜಿತ್   

ಕಾರ್ಕಳ (ಉಡುಪಿ ಜಿಲ್ಲೆ): ತಾಲ್ಲೂಕಿನ ಹೊಸ್ಮಾರು ಜಾಣಮನೆಯ ಬಳಿ ಸೋಮವಾರ ಸಿಡಿಲು ಬಡಿದು ವಿಜಿತ್‌ (38) ಎಂಬುವವರು ಮೃತಪಟ್ಟಿದ್ದಾರೆ. ಮನೆಯ ಆವರಣದಲ್ಲಿದ್ದಾಗ ಏಕಾಏಕಿ ಸಿಡಿಲು ಅಪ್ಪಳಿಸಿ ಮೃತಪಟ್ಟಿದ್ದಾರೆ.

ಮೃತ ವಿಜಿತ್ ನಾಬಿರಾಜ ಹೆಗ್ಡೆ ಅವರ ಪುತ್ರ. ಕುಂದಾಪುರ, ಹೆಬ್ರಿ ಸೇರಿದಂತೆ ಹಲವಡೆ ಸೋಮವಾರ ಸಂಜೆ ಗುಡುಗು ಸಿಡಿಲು ಸಹಿತ ಬಿರುಸಿನ ಮಳೆ ಸುರಿದಿದ್ದು ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT