ADVERTISEMENT

ತೆಂಕ ಹಾಲು ಉತ್ಪಾದಕರಿಗೆ ಶೇ 25 ಲಾಭಾಂಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 4:36 IST
Last Updated 13 ಸೆಪ್ಟೆಂಬರ್ 2022, 4:36 IST
ಮಹಾಸಭೆಯಲ್ಲಿ ಅಧ್ಯಕ್ಷ ಅಶೋಕರಾಜ ಎರ್ಮಾಳು ಮಾತನಾಡಿದರು.
ಮಹಾಸಭೆಯಲ್ಲಿ ಅಧ್ಯಕ್ಷ ಅಶೋಕರಾಜ ಎರ್ಮಾಳು ಮಾತನಾಡಿದರು.   

ಪಡುಬಿದ್ರಿ: ತೆಂಕ ಎರ್ಮಾಳು ಹಾಲು ಉತ್ಪಾದಕರ ಸಹಕಾರ ಸಂಘ ಈ ಸಾಲಿನಲ್ಲಿ ₹5,36,882 ಆದಾಯ ಗಳಿಸಿದ್ದು, ಸದಸ್ಯರಿಗೆ ಶೇ 65 ಬೋನಸ್ ಹಾಗೂ ಶೇ 25ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಅಶೋಕರಾಜ ಎರ್ಮಾಳು ಹೇಳಿದರು.

ಸಂಘದ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಹೆಚ್ಚು ಹಾಲು ತಂದುಕೊಟ್ಟ ಶೈಲಜಾ ಎಚ್. ಶೆಟ್ಟಿ, ಸುಶೀಲಾ, ಗುಣಮಟ್ಟದ ಹಾಲು ನೀಡಿದ ಶೋಭಾ ಕೆ. ಓಮಯ ಪೂಜಾರಿ, ಕುಲುಸುಂಬಿ ಮುಂತಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯನಿರ್ವಹ ಣಾಧಿಕಾರಿ ಪ್ರಶಾಂತ್ ವರದಿ ವಾಚಿಸಿದರು. ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತ್ ಇದ್ದರು. ಸಂಘದ ಉಪಾಧ್ಯಕ್ಷ ಮನೋಜ್ ಕೆ. ಶೆಟ್ಟಿ ಸ್ವಾಗತಿಸಿದರು. ಕೃತಕ ಗರ್ಭಧಾರಣಾ ಕಾರ್ಯಕರ್ತ ಕೇಶವ ಮೊಯಿಲಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.