ಕೊಕ್ಕರ್ಣೆ(ಬ್ರಹ್ಮಾವರ): ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಜಮಂಗೂರು ಗ್ರಾಮದ ಸಾಸ್ತಾವಿನಲ್ಲಿ ಮೊಮ್ಮಕ್ಕಳೊಂದಿಗೆ ಅಸಹಾಯಕರಾಗಿ ವಾಸಿಸುತ್ತಿದ್ದ ರತ್ನ ಮರಕಾಲ್ತಿ ಅವರಿಗೆ ಕೊಕ್ಕರ್ಣೆ ಥಂಡರ್ ಫ್ರೆಂಡ್ಸ್ ಸಹಯೋಗದೊಂದಿಗೆ, ವಿವಿಧ ದಾನಿಗಳ ಸಹಕಾರದಲ್ಲಿ ನವೀಕರಿಸಿದ ಮನೆಯನ್ನು ಫ್ರೆಂಡ್ಸ್ನ ಪ್ರಮುಖ ಎಚ್. ಹರೀಶ್ ಶ್ಯಾನುಭಾಗ್ ಹಾಗೂ ಉದ್ಯಮಿ ಜಗದೀಶ ಮೊಗವೀರ ಶನಿವಾರ ಹಸ್ತಾಂತರಿಸಿದರು.
ಕೊಕ್ಕರ್ಣೆ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ವತಿಯಿಂದ ಭಜನೆ, ಪೂಜೆ ನೆರವೇರಿತು. ಉದ್ಯಮಿ ಕಾಶೀನಾಥ ಶೆಣೈ ಕಜ್ಕೆ ಭಜನಾ ಪುಸ್ತಕ ಹಾಗೂ ತಾಳ ಹಸ್ತಾಂತರಿಸಿದರು. ನಿವೃತ್ತ ಶಿಕ್ಷಕ ಸಂಜೀವ ಮಾಸ್ಟರ್ ಶುಭ ಹಾರೈಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಡಾ.ಸುನೀತಾ ಡಿ.ಶೆಟ್ಟಿ, ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತ ಸೇರ್ವೆಗಾರ್, ರಘುವೀರ ಕಿಣಿ, ಸುನಿಲ್ ಕುಮಾರ್, ಅರ್ಚಕ ರಾಘವೇಂದ್ರ ಪಡಿಯಾರ್, ಪ್ರಮುಖರಾದ ಅಶೋಕ ಕುಂದರ್, ಶ್ರೇಯಸ್ ಶೆಟ್ಟಿ, ಪದ್ಮರಾಜ್ ಆಚಾರ್, ಸದಾಶಿವ, ಸಂದೇಶ ಕಿಣಿ, ಜ್ಯೋತಿ ಎಂ ಪ್ರಭು, ದೀಪಕ್ ಪ್ರಭು, ವಿಶ್ವಾಸ ನಾಯಕ್, ಭಾಸ್ಕರ ಆಚಾರ್, ಅನಂತ ನಾಯಕ್, ಮಂಜು ಸಾಸ್ತಾವು, ರಾಘವ, ಸುಕೇಶ, ಜೀವನ್, ಹರೀಶ, ರವಿ ಮೇಸ್ತ್ರಿ ಇದ್ದರು.
ಥಂಡರ್ ಫ್ರೆಂಡ್ಸ್ನ ಓಂಶ್ರೀ ರಾಘವೇಂದ್ರ ನಾಯಕ್ ಸ್ವಾಗತಿಸಿದರು. ಬೇಬಿ ಸಾಸ್ತಾವು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.