ಬೈಂದೂರು: ಗಂಗೊಳ್ಳಿ ಗ್ರಾಮದ ಮೇಲ್ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ತಂತಿಗೆ ತಗುಲಿ ಬಿದ್ದು ಮೃತಪಟ್ಟ ರಾಷ್ಟ್ರಪಕ್ಷಿ ನವಿಲಿಗೆ ಅಧಿಕಾರಿಗಳು ಭಾನುವಾರ ಅಂತಿಮ ವಿದಾಯ ಹೇಳಿದರು. ಮೃತ ಗಂಡು ನವಿಲು ಐದು ವರ್ಷದ್ದಾಗಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಗಂಗೊಳ್ಳಿ ಆಂಬುಲೆನ್ಸ್ ಚಾಲಕ, ಆಪತ್ಭಾಂದವ ಇಬ್ರಾಹಿಂ ಗಂಗೊಳ್ಳಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಗಂಗೊಳ್ಳಿ ಠಾಣೆಯ ಪೊಲೀಸ್ ಹಾಗೂ ಕುಂದಾಪುರ ವಲಯ ಅರಾಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಮಹಜರು ನಡೆಸಿದರು. ಬಳಿಕ ವಂಡ್ಸೆ ನಾಟ ಸಂಗ್ರಹಾಲಯದ ಆವರಣದಲ್ಲಿ ಚಿತೆ ನಿರ್ಮಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ರವೀಂದ್ರ ಪೂಜಾರಿ ಸಹರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.