ADVERTISEMENT

ರಾಷ್ಟ್ರಪಕ್ಷಿಗೆ ಅಂತಿಮ ವಿದಾಯ

ವಿದ್ಯುತ್ ತಂತಿ ತಗುಲಿ ನವಿಲು ಸಾವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 6:48 IST
Last Updated 20 ಜುಲೈ 2021, 6:48 IST
ಗಂಗೊಳ್ಳಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ನವಿಲು
ಗಂಗೊಳ್ಳಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ನವಿಲು   

ಬೈಂದೂರು: ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ತಂತಿಗೆ ತಗುಲಿ ಬಿದ್ದು ಮೃತಪಟ್ಟ ರಾಷ್ಟ್ರಪಕ್ಷಿ ನವಿಲಿಗೆ ಅಧಿಕಾರಿಗಳು ಭಾನುವಾರ ಅಂತಿಮ ವಿದಾಯ ಹೇಳಿದರು. ಮೃತ ಗಂಡು ನವಿಲು ಐದು ವರ್ಷದ್ದಾಗಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಗಂಗೊಳ್ಳಿ ಆಂಬುಲೆನ್ಸ್ ಚಾಲಕ, ಆಪತ್ಭಾಂದವ ಇಬ್ರಾಹಿಂ ಗಂಗೊಳ್ಳಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಗಂಗೊಳ್ಳಿ ಠಾಣೆಯ ಪೊಲೀಸ್ ಹಾಗೂ ಕುಂದಾಪುರ ವಲಯ ಅರಾಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಮಹಜರು ನಡೆಸಿದರು. ಬಳಿಕ ವಂಡ್ಸೆ ನಾಟ ಸಂಗ್ರಹಾಲಯದ ಆವರಣದಲ್ಲಿ ಚಿತೆ ನಿರ್ಮಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ರವೀಂದ್ರ ಪೂಜಾರಿ ಸಹರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT