ADVERTISEMENT

ಕುಂದಾಪುರ: ಅಕ್ರಮ ಮರಳು ಸಾಗಾಣ; ದೋಣಿ ವಶಕ್ಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 13:36 IST
Last Updated 1 ಜೂನ್ 2025, 13:36 IST
ಕುಂದಾಪುರ ನಗರದ ನಾನಾ ಸಾಹೇಬ್ ರಸ್ತೆಯಲ್ಲಿ ಅಕ್ರಮ ಮರಳು ಸಾಗಾಟದ ದೋಣಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ನಗರದ ನಾನಾ ಸಾಹೇಬ್ ರಸ್ತೆಯಲ್ಲಿ ಅಕ್ರಮ ಮರಳು ಸಾಗಾಟದ ದೋಣಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.   

ಕುಂದಾಪುರ: ನಗರದ ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್‌ ರಸ್ತೆಯ ರಿಂಗ್‌ ರೋಡ್‌ ಸಮೀಪ ಪಂಚಗಂಗಾವಳಿ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ದೋಣಿಯಲ್ಲಿ ತುಂಬಿಸುತ್ತಿರುವುದಾಗಿ ಬಂದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ದೋಣಿ, ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್‌ಐ ನಂಜಾ ನಾಯ್ಕ್‌ ನೇತೃತ್ವ ವಹಿಸಿದ್ದರು. ಆರೋಪಿ ಉದಯ ಮೆಂಡನ್‌ ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ‌ ಸುನಿಲ್‌ ಪಲಾಯನ ಮಾಡಿದ್ದಾನೆ. ಫೈಬರ್‌ ದೋಣಿ, 1.5 ಯುನಿಟ್‌ ಮರಳು, ಟಿಪ್ಪರ್‌, ಕಬ್ಬಿಣದ ಹಾರೆ, ಫೈಬರ ಬುಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT