ADVERTISEMENT

ಕಾರ್ಕಳ: ‘ಕಲಾವಿದರು ಒಂದೇ ಸೂರಿನಡಿ ಸೇರಲಿ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 6:41 IST
Last Updated 6 ಫೆಬ್ರುವರಿ 2023, 6:41 IST
ಕಾರ್ಕಳದ ಸಪ್ತಸ್ವರ ಸಾಂಪ್ರದಾಯಿಕ ಮತ್ತು ಜಾನಪದ ವಾದ್ಯ ಕಲಾವಿದರ ಸಂಘದ ಮಹಾಸಭೆಯಲ್ಲಿ ಕಲಾವಿದರನ್ನು ಅಭಿನಂದಿಸಲಾಯಿತು
ಕಾರ್ಕಳದ ಸಪ್ತಸ್ವರ ಸಾಂಪ್ರದಾಯಿಕ ಮತ್ತು ಜಾನಪದ ವಾದ್ಯ ಕಲಾವಿದರ ಸಂಘದ ಮಹಾಸಭೆಯಲ್ಲಿ ಕಲಾವಿದರನ್ನು ಅಭಿನಂದಿಸಲಾಯಿತು   

ಕಾರ್ಕಳ: ‘ಕಲಾವಿದರು ಒಂದೇ ಸೂರಿನಡಿ ಸೇರಬೇಕು. ಇದಕ್ಕಾಗಿ ಆರು ವರ್ಷಗಳಿಂದ ಸಪ್ತಸ್ವರ ಕಲಾವಿದರ ಸಂಘ ನಿರಂತರ ಸಂಪರ್ಕ ಬೆಳೆಸಲು ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ’ ಎಂದು ನಾದಸ್ವರ ವಿಶಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಗೇಶ್ ಎ.ಬಪ್ಪನಾಡು ಹೇಳಿದರು.

ಇಲ್ಲಿನ ವೇಣುಗೋಪಾಲಕೃಷ್ಣ ದೇವಸ್ಥಾನದ ಕೃಷ್ಣ ಸಭಾಭವನದಲ್ಲಿ ಸಪ್ತಸ್ವರ ಸಾಂಪ್ರದಾಯಿಕ ಮತ್ತು ಜಾನಪದ ವಾದ್ಯ ಕಲಾವಿದರ ಸಂಘದ ವತಿಯಿಂದ ಆಯೋಜಿಸಿದ್ದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಸದಸ್ಯರು ಸಂಘದ ಮಹಾಸಭೆಯಲ್ಲಿ ಗೈರು ಹಾಜರಾಗುವುದನ್ನು ತಪ್ಪಿಸಬೇಕು ಎಂದರು. ವಕೀಲ ರವೀಂದ್ರ ಮೊಯಿಲಿ ಮಾತನಾಡಿ, ಕಳೆದ ಬಾರಿ ಕಾರ್ಕಳ ಉತ್ಸವದ ಸಮಯದಲ್ಲಿ ಎಲ್ಲಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಕಲಾವಿದರನ್ನು ಅಭಿನಂದಿಸಲಾ
ಯಿತು. ಸಂಘದ ಗೌರವಾಧ್ಯಕ್ಷ ಸುಂದರ ಸಪಲಿಗ, ಅಧ್ಯಕ್ಷ ಶಿವರಾಮ ದೇವಾಡಿಗ, ಕೋಶಾಧಿಕಾರಿ ಪಾಂಡು ದೇವಾಡಿಗ, ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.