ADVERTISEMENT

ಡಿವೈಎನ್‌ ಪಾರ್ಕ್‌ನಲ್ಲಿ ಎಸ್‌ಪಿಬಿ ಗಾನಸುಧೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:47 IST
Last Updated 25 ಸೆಪ್ಟೆಂಬರ್ 2020, 16:47 IST
ಬ್ರಹ್ಮಾವರದ ಡಿವೈನ್‌ ಪಾರ್ಕ್‌ನಲ್ಲಿ 2015, ಆ.15ರಂದು ನಡೆದ ಸಮಾರಂಭದಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸ್ಮರಣಿಕೆ ನೀಡುತ್ತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ.
ಬ್ರಹ್ಮಾವರದ ಡಿವೈನ್‌ ಪಾರ್ಕ್‌ನಲ್ಲಿ 2015, ಆ.15ರಂದು ನಡೆದ ಸಮಾರಂಭದಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸ್ಮರಣಿಕೆ ನೀಡುತ್ತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ.   

ಬ್ರಹ್ಮಾವರ: ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಆ.15, 2012ರಲ್ಲಿ ಕೋಟದ ಡಿವೈನ್‌ ಪಾರ್ಕ್‌ನ ಸಭಾಂಗಣದಲ್ಲಿ ನಡೆದ ರಾಷ್ಟ್ರನಿರ್ಮಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಂದು ಎಸ್‌ಪಿಬಿ ನಡೆಸಿಕೊಟ್ಟ 3 ಗಂಟೆಯ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಎಸ್‌ಪಿಬಿ ಅವರಿಗೆ ‘ನಾದನೇತಾರ’ ಬಿರುದು ಪ್ರದಾನ ಮಾಡಿದ್ದರು. ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈನ್ ಪಾರ್ಕ್‌ನ ಆಡಳಿತ ನಿರ್ದೇಶಕರಾದ ಚಂದ್ರಶೇಖರ ಉಡುಪ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT