ಶಿರ್ವ (ಉಡುಪಿ): ಮೂಡುಬೆಳ್ಳೆಯ ಪಾಂಬೂರು ಕಬೇಡಿ ಬಳಿಯ ಪಾಬೂರು ಹೊಳೆಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ಭಾನುವಾರ ಮೃತಪಟ್ಟಿದ್ದಾರೆ.
ಕಟಪಾಡಿ ಸಮೀಪದ ಶಂಕರಪುರದ ಕೆಲ್ವಿನ್ ಕೆಸ್ತಲಿನೊ (21), ಮೂಡುಬೆಟ್ಟು ಸರ್ಕಾರಿ ಗುಡ್ಡೆಯ ಜಾಬೀರ್ (18) ಹಾಗೂ ರಿಜ್ವಾನ್ (28) ಮೃತರು.
ಕರ್ಫ್ಯೂ ಇದ್ದಿದ್ದರಿಂದ ಸಮಯ ಕಳೆಯಲು ನದಿಗೆ ಈಜಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಯುವಕರ ಶವಗಳನ್ನು ಹೊರ ತೆಗೆದಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.