ಉಡುಪಿ: ಉಡುಪಿ ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ 1ರಲ್ಲಿ ನೂತನ ಸಸ್ಯಹಾರಿ ರೆಸ್ಟೊರೆಂಟ್ ಆರಂಭವಾಗಿದ್ದು ಬುಧವಾರ ಕೊಂಕಣ್ ರೈಲ್ವೆ ಕಾರ್ಪೊರೆಷನ್ ಎಂಡಿ ಸಂಜಯ್ ಗುಪ್ತಾ ಉದ್ಘಾಟಿಸಿದರು.
ರೈಲು ನಿಲ್ದಾಣದಲ್ಲಿ ರೆಸ್ಟೊರೆಂಟ್ ನಿರ್ಮಾಣವಾಗಬೇಕು ಎಂಬ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದೆ. ರೆಸ್ಟೊರೆಂಟ್ನಲ್ಲಿ ಶುಚಿ, ರುಚಿಯಾದ ಆಹಾರ ಪ್ರಯಾಣಿಕರಿಗೆ ಸಿಗಲಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೊಂಕಣ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಭಾಗೀಯ ರೈಲ್ವೆ ಮ್ಯಾನೆಜರ್ ಬಾಳಾಸಾಹೆಬ್ ಬಿ.ನಿಕ್ಕಂ, ಮುಖ್ಯ ಪರ್ಸನಲ್ ಅಧಿಕಾರಿ ಅನುರಾಗ್ ಮೆಶ್ರಮ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.